ಕರ್ನಾಟಕ

ದೆವ್ವ ಬಿಡಿಸುವ ನೆಪದಲ್ಲಿ ಮಸೀದಿ ಮಾಂತ್ರಿಕನಿಂದ ಮಹಿಳೆಯ ಅತ್ಯಾಚಾರ!

Pinterest LinkedIn Tumblr


ಹುಣಸೂರು: ಮದುವೆ ಮಾಡಿಸುವ ನೆಪದಲ್ಲಿ ಅವಿವಾಹಿತ ಮಹಿಳೆ ಮೇಲೆ ಮಸೀದಿಯೊಂದರ ಮುಕ್ರಿಯೊಬ್ಬ ಅತ್ಯಾಚಾರ ನಡೆಸಿರುವ ಅಮಾನವೀಯ ಘಟನೆ ನಡೆದಿದೆ.

ಹುಣಸೂರು ತಾಲೂಕು ಹೈರಿಗೆ ಮಸೀದಿಯ ಮುಕ್ರಿ (ಮಾಂತ್ರಿಕ) ಜಬಿವುಲ್ಲಾಅತ್ಯಾಚಾರ ವೆಸಗಿರುವ ಬಂಧಿತ ಆರೋಪಿ. ಈತ ಹುಣಸೂರಿನ ನಿವಾಸಿಯಾಗಿದ್ದಾನೆ. ಚಿಲ್ಕುಂದದ 33 ವರ್ಷದ ಮಹಿಳೆ ಅತ್ಯಾಚಾರಕ್ಕೊಳಗಾದ ಸಂತ್ರಸ್ಥೆ. ಅವಿವಾಹಿತ ಮಹಿಳೆಯನ್ನು ಆಕೆಯ ಸಂಬಂಧಿಕರು ಈತನ ಬಳಿ ಕರೆತಂದು ಮದುವೆಯಾಗಿಲ್ಲಎಂದು ತಿಳಿಸಿದ್ದಾರೆ. ಈಕೆಗೆ ಮಾಟ ಮಂತ್ರ ಪ್ರಯೋಗ ವಾಗಿದೆ, ದೆವ್ವ ಹಿಡಿದಿದೆ ಎಂದು ಅದನ್ನು ಬಿಡಿಸುವ ನಾಟಕವಾಡಿ ಪಿರಿಯಾಪಟ್ಟಣ ಬಳಿಯ ದರ್ಗಾದ ಬಳಿಗೆ ಕರೆತಂದು, ಅಲ್ಲಿಈಕೆಯ ಜೊತೆಯಲ್ಲಿ ಬಂದಿದ್ದ ಅಕ್ಕನ ಮಗನನ್ನು ದೆವ್ವ ಬಿಡಿಸುವ ವೇಳೆ ನಿನ್ನನ್ನು ಹಿಡಿದುಕೊಳ್ಳಬಹುದೆಂದು ಹೆದರಿಸಿ ದೂರ ಕಳುಹಿಸಿದ ನಂತರ ದರ್ಗಾದ ಆವರಣದಲ್ಲೇ ಸ್ನಾನ ಮಾಡಿಸುವ ನೆಪದಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ.

ಆಕೆ ಚಿಲ್ಕುಂದಕ್ಕೆ ವಾಪಸ್‌ ಬಂದ ನಂತರ ನಡೆದ ಘಟನೆಯನ್ನು ಮನೆಯವರಿಗೆ ವಿಷಯ ತಿಳಿಸಿದ್ದರ ಮೇರೆಗೆ ಆಕೆಯ ಸಹೋದರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾನೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಹೈರಿಗೆ ಗ್ರಾಮದಲ್ಲಿ ಬಂಧಿಸಲಾಗಿದೆ ಎಂದು ಡಿವೈಎಸ್‌ಪಿ ಸುಂದರ್‌ರಾಜ್‌ ತಿಳಿಸಿದ್ದಾರೆ.

Comments are closed.