ಕರ್ನಾಟಕ

ಗಂಡ-ಹೆಂಡಿರ ಜಗಳದಲ್ಲಿ ಮಗುವಿಗೆ ಬಿದ್ದ ಮಚ್ಚೇಟು..!

Pinterest LinkedIn Tumblr


ಶಿವಮೊಗ್ಗ: ಏಳು ತಿಂಗಳ ಹಸುಳೆಯ ಹೃದಯದಲ್ಲಿ ರಂಧ್ರವಿದ್ದ ಕಾರಣ ಜೀರೋ ಟ್ರಾಫಿಕ್ ಮೂಲಕ ಶಿವಮೊಗ್ಗದಿಂದ ಬೆಂಗಳೂರಿಗೆ ಆಂಬುಲೆನ್ಸ್‌ನಲ್ಲಿ ಕರೆದೊಯ್ದ ಪ್ರಕರಣ ಹಸಿರಾಗಿರುವಾಗಲೇ ಭಾನುವಾರ ಅಂಥದ್ದೇ ಇನ್ನೊಂದು ಪ್ರಕರಣಕ್ಕೆ ಶಿವಮೊಗ್ಗ ಸಾಕ್ಷಿಯಾಗಿದೆ. ಒಂದು ವರ್ಷ ನಾಲ್ಕು ತಿಂಗಳ ಹಸುಳೆಯ ಪ್ರಾಣ ಉಳಿಸಲು ಪೊಲೀಸ್ ಇಲಾಖೆ ಜೀರೋ ಟ್ರಾಫಿಕ್ ಕಲ್ಪಿಸಿ ಮಾನವೀಯತೆ ಮೆರೆದಿದೆ.

ಕಡೂರು ಪಟ್ಟಣದ ವೇದಾನಗರ ವಾಸಿ ಜೀಷನ್ ಮತ್ತು ಹಾಜರಾಬಾನು ದಂಪತಿಯ ಹೆಣ್ಣು ಮಗು ಹಿರಾಂ ನಾಜ್ ಅವರಿದ್ದ ಆಂಬ್ಯುಲೆನ್ಸ್‌ಗೆ ಜೀರೋ ಟ್ರಾಫಿಕ್ ಕಲ್ಪಿಸಲಾಯ್ತು. ತಲೆಗೆ ತೀವ್ರ ಪೆಟ್ಟು ಬಿದ್ದ ಹಿನ್ನಲೆಯಲ್ಲಿ ಮಗುವಿನ ಜೀವ ಉಳಿಸಲು ಶಿವಮೊಗ್ಗದಿಂದ ಬೆಂಗಳೂರಿಗೆ ಜಿರೋ ಟ್ರಾಫಿಕ್ ಮೂಲಕ ಚಿಕಿತ್ಸೆಗೆ ಕರೆದೊಯ್ಯಲಾಗಿದೆ.

ದಂಪತಿ ಜಗಳದಲ್ಲಿ ಮಗುವಿಗೆ ಬಿದ್ದಿತ್ತು ಪೆಟ್ಟು

ದಂಪತಿ ಜೀಷನ್ ಮತ್ತು ಹಾಜರಾಬಾನು ನಡುವೆ ನಡೆದ ಶುಕ್ರವಾರ ರಾತ್ರಿ ಜಗಳ ನಡೆದಿದ್ದು, ಪತಿಯು ತನ್ನ ಪತ್ನಿಗೆ ಮಚ್ಚಿನಿಂದ ಹೊಡೆಯಲು ಹೋದಾಗ ಅದು ಕೈತಪ್ಪಿ ಮಗುವಿನ ತಲೆಗೆ ಬಿದ್ದಿತ್ತು. ತಕ್ಷಣ ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಶಿವಮೊಗ್ಗ ಆಸ್ಪತ್ರೆಗೆ ಕರೆತರಲಾಗಿತ್ತು. ಈ ಬಗ್ಗೆ ಕಡೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಶಿವಮೊಗ್ಗ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಗುವಿನ ಆರೋಗ್ಯ ಸ್ಥಿತಿ ಸುಧಾರಣೆಯಾಗದೆ ಇನ್ನಷ್ಟು ಹದಗೆಟ್ಟಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಭಾನುವಾರ ಬೆಂಗಳೂರಿಗೆ ಕಳುಹಿಸಲು ವೈದ್ಯರು ನಿರ್ಧರಿಸಿದರು. ಅದರನ್ವಯ, ಶಿವಮೊಗ್ಗದಿಂದ ಬೆಂಗಳೂರಿನವರೆಗೆ ಮುಖ್ಯ ಪಟ್ಟಣಗಳಲ್ಲಿ ಜೀರೋ ಟ್ರಾಫಿಕ್ ವ್ಯವಸ್ಥೆಯನ್ನು ಆಯಾಯ ಸ್ಥಳೀಯ ಪೊಲೀಸರು ಕಲ್ಪಿಸಿದ್ದು, ಕಡೂರಿನಲ್ಲಿ ಭಾನುವಾರ ಸಂಜೆ 6.46ಕ್ಕೆ ಅಂಬ್ಯುಲೆನ್ಸ್ ಹಾದು ಹೋಯ್ತು.

Comments are closed.