ಕರ್ನಾಟಕ

ನನಗೆ ನಿಗಮ ಮಂಡಳಿಯಲ್ಲಿ ಸ್ಥಾನ ಬೇಡ: ಎಚ್‌ ವಿಶ್ವನಾಥ್

Pinterest LinkedIn Tumblr


ಮೈಸೂರು: ನಾವು ಈ ಹಿಂದಿನ ಕೆಲ ವರ್ಷಗಳಲ್ಲಿ ಮಂತ್ರಿ ಪದವಿಯಲ್ಲಿದ್ದುಕೊಂಡು ಕೆಲಸ ಮಾಡಿದ ಅನುಭವ ಉಳ್ಳವರು. ಹಾಗಾಗಿ ನನಗೆ ನಿಗಮ ಮಂಡಳಿಯಲ್ಲಿ ಯಾವುದೇ ಸ್ಥಾನ ಬೇಡ ಎಂದು ಮಾಜಿ ಸಚಿವ ಎಚ್‌.ವಿಶ್ವನಾಥ್‌ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಹಿಂದೆ ಸಂಪುಟ ದರ್ಜೆ ಸಚಿವರಾಗಿ ಉನ್ನತ ಕೆಲಸಗಳನ್ನು ನಿರ್ವಹಿಸಿದ್ದೇವೆ. ಹೀಗಾಗಿ ನನಗೆ ಮತ್ತು ಎಂಟಿಬಿ ಅವರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ನೀಡುವ ಅಗತ್ಯವಿಲ್ಲ. ಆ ಸ್ಥಾನಗಳನ್ನು ಪಕ್ಷದ ಹೊಸಬರಿಗೆ, ಕಾರ್ಯಕರ್ತರಿಗೆ ನೀಡಲಿ. ನಾವು ಈಗಲೂ ಬಿಎಸ್ ಯಡಿಯೂರಪ್ಪ ಅವರನ್ನು ನಂಬಿದ್ದೇವೆ ಅಷ್ಟೇ,” ಎಂದರು.

ಈ ಹಿಂದೆ ಇದ್ದ ಮೈತ್ರಿ ಸರಕಾರಕ್ಕಿಂತ ಬಿಜೆಪಿಯು ಹೆಚ್ಚಿನ ಅವಧಿ ಅಧಿಕಾರದಲ್ಲಿರುತ್ತದೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಎಷ್ಟು ದಿನ ಇರುತ್ತದೆ ಎಂಬುದು ನಮಗೆ ಗೊತ್ತಿಲ್ಲ. ಆದರೆ, ನಿಮ್ಮ ಮೈತ್ರಿ ಸರಕಾರಕ್ಕಿಂತ ಹೆಚ್ಚು ದಿನ ಇರುತ್ತದೆ ಎಂಬುದಂತೂ ನಿಜ ಎಂದರು.

ಅಧಿಕಾರ ಕಳೆದುಕೊಂಡ ಭರಾಟೆಯಲ್ಲಿ ಎಚ್‌ಡಿ ಕುಮಾರಸ್ವಾಮಿ ಅವರು ಮನಬಂದಂತೆ ಮಾತನಾಡುತ್ತಾರೆ. ಒಮ್ಮೆ ಮಾತನಾಡುವಾಗ ಅವರ ಬಗ್ಗೆಯೂ ಯೋಚಿಸಿಕೊಳ್ಳಲಿ. ತಮ್ಮ ಸರಕಾರ ಎಷ್ಟು ದಿನ ನಡೆಯಿತೆಂದು ಯೋಚಿಸಲಿ ಎಂದು ಟಾಂಗ್‌ ನೀಡಿದರು.

Comments are closed.