ಕರ್ನಾಟಕ

ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದು ನೀರಿಗೆ ಹಾರಿದ ಪ್ರೇಮಿಗಳು: ಯುವಕ ಸಾವು, ಯುವತಿ ಪಾರು

Pinterest LinkedIn Tumblr


ಶ್ರೀರಂಗಪಟ್ಟಣ: ಪ್ರೇಮಿಗಳ ನಡುವೆ‌ ಕ್ಷುಲ್ಲಕ ವಿಚಾರಕ್ಕೆ ಜಗಳ ನಡೆದು ಇಬ್ಬರು ಆತ್ಮಹತ್ಯೆಗೆ ಯತ್ನಿಸಿದ ಪರಿಣಾಮ ಯುವಕ ಮೃತಪಟ್ಟು, ಯುವತಿ ಪಾರಾಗಿರುವ ಘಟನೆ ನಡೆದಿದೆ.

ಆಳದ ಹೊಂಡಕ್ಕೆ ಬಿದ್ದು ಪಾಲಳ್ಳಿಯ ಅರ್ಜುನ್​ (26) ಮೃತಟ್ಟರೇ, ಅದೇ ಗ್ರಾಮದ ಯುವತಿ (19) ಬದುಕುಳಿದಿದ್ದಾರೆ.

ಅರ್ಜುನ್ ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ ಲಿಫ್ಟ್ ಆಪರೇಟರ್ ಆಗಿ ಕೆಲಸ ನಿರ್ವಸುತ್ತಿದ್ದಾರೆ. ಇಬ್ಬರು ಹಲವು ವರ್ಷಗಳಿಂದ ಪರಸ್ವರ ಪ್ರೀತಿ ಮಾಡುತ್ತಿದ್ದರು. ಇವರ ಪ್ರೀತಿಗೆ ಪಾಲಕರು ಅಡ್ಡಿಯಾಗಿರಲಿಲ್ಲ ಎಂದು ತಿಳಿದು ಬಂದಿದೆ.

ಇಬ್ಬರು ಕ್ಷುಲಕ ವಿಚಾರಕ್ಕೆ ಜಗಳ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದರು. ಅದರಂತೆ ಹಳೆ‌ಕಿರಂಗೂರು ಹಾಗೂ ಕೆಂಗಾರಕೊಪ್ಪಲು ರಸ್ತೆಯಲ್ಲಿರುವ ಆಳದ ಹೊಂಡಕ್ಕೆ ಧುಮುಕಿದರು.

ಹೊಂಡದ ಪಕ್ಕದಲ್ಲಿ ಇರುವ ಗದ್ದೆಯಲ್ಲಿ ಕೃಷಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಇಬ್ಬರು ಹೊಂಡಕ್ಕೆ ಹಾರಿದ್ದನ್ನು ನೋಡಿ ಆಗಮಿಸಿದರು. ಇಬ್ಬರನ್ನು ಮೇಲಕ್ಕೆ ಎತ್ತಿದರು. ಅಷ್ಟೊತ್ತಿಗೆ ಅರ್ಜುನ್​ ಮೃತಪಟ್ಟಿದ್ದರು. ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶ್ರೀರಂಗಪಟ್ಟಣ ಟೌನ್​ ಪೊಲೀಸರು ದೂರು ದಾಖಲಿಸಿದ್ದಾರೆ.

Comments are closed.