ಕರ್ನಾಟಕ

ಚಿಂತಾಮಣಿ: ಪೌರತ್ವ ಕಾಯ್ದೆ ಸ್ವಾಗತಿಸಿ ತಿರಂಗ ರ‍್ಯಾಲಿ ನಡೆಸಿದ ಎಬಿವಿಪಿ

Pinterest LinkedIn Tumblr


ಚಿಂತಾಮಣಿ (ಚಿಕ್ಕಬಳ್ಳಾಪುರ): ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸ್ವಾಗತಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ವಿದ್ಯಾರ್ಥಿಗಳು ನಗರದ ಪ್ರಮುಖ ಬೀದಿಗಳಲ್ಲಿ ತಿರಂಗ ರ‍್ಯಾಲಿ ನಡೆಸಿದರು.

ಎ.ಬಿ.ವಿ.ಪಿ ವಿಭಾಗ ಸಂಚಾಲಕ್‌ ಸುರೇಶ್‌ ಮಾತನಾಡಿ ಕಳೆದ 5-6 ವರ್ಷಗಳಿಂದ ಕೇಂದ್ರ ಸರಕಾರ ಹಲವು ನಿರ್ಣಯಗಳನ್ನು ಮಾಡಿ ಜನಸ್ನೇಹಿ, ರಾಷ್ಟ್ರೀಯ ಹಿತದೃಷ್ಟಿಯಿಂದ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದೆ. ವಿದ್ಯಾರ್ಥಿ ಪರಿಷತ್ತಿನ ಹತ್ತಾರು ವರ್ಷಗಳಿಂದ ದೇಶದ ಹಿತ ದೃಷ್ಟಿಯಿಂದ ಅಕ್ರಮ ವಲಸಿಗರನ್ನು ದೇಶದಿಂದ ಹೊರ ಹಾಕಬೇಕೆಂದು ಅಗ್ರಹಿಸುತ್ತದೆ. ಉದಾಹರಣೆಯೆಂಬಂತೆ 2012 ರಲ್ಲಿ ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ಹೊರಹಾಕಲು ಅಗ್ರಹಿಸಿ ಚಿಕನ್‌ ನೆಕ್‌ ಚಲೋ ಹಮ್ಮಿಕೊಂಡು ಅಂದೆ ಅಗ್ರಹಿಸಿತ್ತು ಎಂದರು.

ಹಲವು ವರ್ಷಗಳ ಬೇಡಿಕೆ ಪ್ರಸ್ತುತ ಕಾರ್ಯರೂಪಕ್ಕೆ ಬಂದಿದ್ದು ಈಗ ನಡೆಯುತ್ತಿರುವ ಕೇಂದ್ರ ಸರಕರಾದ ಅಧಿವೇಶನದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿ.ಎ.ಬಿ ಮತ್ತು ಎನ್‌.ಆರ್‌.ಸಿ) ಜಾರಿಗೊಳಿಸಿದ್ದು ಭಾರತದ ಹಿತದೃಷ್ಟಿಯಿಂದ ಸರಿಯಾಗಿದ್ದು ಅದನ್ನು ಕೋಟ್ಯಾಂತರ ವಿದ್ಯಾರ್ಥಿಗಳ ನಾಯಕತ್ವ ವಹಿಸಿರುವ ವಿದ್ಯಾರ್ಥಿ ಪರಿಷತ್ತು ಸ್ವಾಗತಿಸುತ್ತದೆ ಮತ್ತು ಕೇಂದ್ರ ಸರಕಾರದ ಬೆಂಬಲಕ್ಕೆ ನಿಲ್ಲುತ್ತದೆ ಎಂದು ಹೇಳಿದರು.

ಎ.ಬಿ.ವಿ.ಪಿ ಸಂಘಟನಾ ಕಾರ್ಯದರ್ಶಿ ಪ್ರಶಾಂತ್‌ ಮಾತನಾಡಿ ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜನರ ಮಧ್ಯೆ ಕಮ್ಯೂನಿಷ್ಠರ್‌ ಸೇರಿದ್ದಂತೆ ಹಲವರು ಜನಮಾನಸದಲ್ಲಿ ತಪ್ಪು ಕಲ್ಪನೆಯನ್ನು ಮೂಡಿಸಿ ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸುವಂತಹ ಕೆಲಸಗಳಿಗೆ ವಿದ್ಯಾರ್ಥಿ ಪರಿಷತ್ತಿನ ವಿರೋಧವಿದೆಯೆಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿ ಪರಿಷತ್ತಿ ತಾಲ್ಲೂಕು ಸಂಚಾಲಕರಾದ ಗೋರ್ವಧನ್‌ ಚಾರಿ, ನಗರ ಕಾರ್ಯದರ್ಶಿಯಾದ ನರೇಂದ್ರ, ಪ್ರಮುಖ್‌, ತೇಜು, ಸೇರಿದ್ದಂತೆ ಸಾವಿರಾರು ವಿದ್ಯಾರ್ಥಿಗಳಿದ್ದರು.

Comments are closed.