ಶಿವಮೊಗ್ಗ: ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದ ದಂಪತಿಗಳು ಒಂದೇ ಸೀರೆಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಶಿವಮೊಗ್ಗದ ಭದ್ರಾವತಿಯಲ್ಲಿ ನಡೆದಿದೆ.
ಆಗರದಳ್ಳಿ ಕ್ಯಾಂಪ್ ನ 32 ವರ್ಷದ ಸಂತೋಷ್ ಮತ್ತು 26 ವರ್ಷದ ಪಾರ್ವತಿ ಆತ್ಮಹತ್ಯೆಗೆ ಶರಣಾದ ದುರ್ದೈವಿಗಳು. ಭೂಮಿ ಹುಣ್ಣಿಮೆ ಪ್ರಯುಕ್ತ ಶನಿವಾರ ರಾತ್ರಿ ವಿವಿಧ ಅಡುಗೆ ಸಿದ್ಧಪಡಿಸಿದ್ದರು.
ಭಾನುವಾರ ಬೆಳಗ್ಗೆ ಭೂಮಿ ಪೂಜೆ ಮಾಡಬೇಕಿತ್ತು. ಅಂತೆ ಸಂತೋಷ್ ಅವರ ತಾಯಿ ಮತ್ತೊಬ್ಬ ಮಗ ಈಶ್ವರ್ ಕುಟುಂಬದ ಜತೆ ತೋಟಕ್ಕೆ ತೆರಳಿದ್ದರು. ಸಂತೋಷ್ ಪತ್ನಿ ಜೊತೆ ಬೈಕ್ ನಲ್ಲಿ ಬರುವುದಾಗಿ ತಿಳಿಸಿದ್ದರು.
ಪೂಜೆಯ ಸಮಯ ಮೀರಿದರು ಸಂತೋಷ್ ಬಾರದೆ ಇದ್ದಿದ್ದರಿಂದ ಕುಟುಂಬಸ್ಥರು ಸಂತೋಷ್ ಗೆ ಕರೆ ಮಾಡಿದ್ದಾರೆ. ಆದರೆ ಸಂತೋಷ್ ಕರೆ ಸ್ವೀಕರಿಸಿಲ್ಲ. ಪೂಜೆ ಮುಗಿಸಿ ಸಂಜೆ ಮನೆಗೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಹೊಳೆ ಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.