ಕರ್ನಾಟಕ

ಅಕ್ರಮ ಸಂಬಂಧಕ್ಕೆ ಒಪ್ಪದ ವಿವಾಹಿತೆಯನ್ನು ಸುಟ್ಟು ಕೊಂದ ಯುವಕ!

Pinterest LinkedIn Tumblr

ತುಮಕೂರು: ಅನೈತಿಕ ಸಂಬಂಧ ನಿರಾಕರಿಸಿದ ವಿವಾಹಿತೆಯನ್ನು ಯುವಕನೊಬ್ಬ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ಪಾವಗಡದ ಮುರರಾಯನಹಳ್ಳಿಯಲ್ಲಿ ಸಂಭವಿಸಿದೆ.

ಸುಜಾತ ಹತ್ಯೆಯಾದ ಮಹಿಳೆ. ಮಹಿಳೆಯನ್ನು ಬೆಂಕಿ ಹಚ್ಚಿ ದಹಿಸಿದ ಯುವಕ ಗಿರೀಶ್​ ಬಾಬು.

ಸುಜಾತಳಿಗೆ ವಿವಾಹವಾಗಿ ಪತಿ ಜೊತೆ ವಾಸಿಸುತ್ತಿದ್ದಳು. ಗ್ರಾಮದ ಯುವಕ ಗಿರೀಶ್​ ಬಾಬು ಎಂಬಾತ ಪತಿ ಇಲ್ಲದ ವೇಳೆ ಮನೆಗೆ ಬಂದು ದೈಹಿಕ ಸಂಪರ್ಕ ಹೊಂದುವಂತೆ ಪೀಡಿಸುತ್ತಿದ್ದ. ಆದರೆ ಮಹಿಳೆ ಇದನ್ನು ನಿರಾಕರಿಸಿ ಪತಿಗೆ ತಿಳಿಸುವುದಾಗಿ ಹೇಳಿದ್ದಳು. ಇದರಿಂದ ಕುಪಿತಗೊಂಡ ಗಿರೀಶ್​ ಬಾಬು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಆರೋಪಿ ಗಿರೀಶ್​ಬಾಬುವನ್ನು ಪಾವಗಡ ಪೊಲೀಸರು ಬಂಧಿಸಿದ್ದಾರೆ.

Comments are closed.