ತುಮಕೂರು: ಅನೈತಿಕ ಸಂಬಂಧ ನಿರಾಕರಿಸಿದ ವಿವಾಹಿತೆಯನ್ನು ಯುವಕನೊಬ್ಬ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ಪಾವಗಡದ ಮುರರಾಯನಹಳ್ಳಿಯಲ್ಲಿ ಸಂಭವಿಸಿದೆ.
ಸುಜಾತ ಹತ್ಯೆಯಾದ ಮಹಿಳೆ. ಮಹಿಳೆಯನ್ನು ಬೆಂಕಿ ಹಚ್ಚಿ ದಹಿಸಿದ ಯುವಕ ಗಿರೀಶ್ ಬಾಬು.
ಸುಜಾತಳಿಗೆ ವಿವಾಹವಾಗಿ ಪತಿ ಜೊತೆ ವಾಸಿಸುತ್ತಿದ್ದಳು. ಗ್ರಾಮದ ಯುವಕ ಗಿರೀಶ್ ಬಾಬು ಎಂಬಾತ ಪತಿ ಇಲ್ಲದ ವೇಳೆ ಮನೆಗೆ ಬಂದು ದೈಹಿಕ ಸಂಪರ್ಕ ಹೊಂದುವಂತೆ ಪೀಡಿಸುತ್ತಿದ್ದ. ಆದರೆ ಮಹಿಳೆ ಇದನ್ನು ನಿರಾಕರಿಸಿ ಪತಿಗೆ ತಿಳಿಸುವುದಾಗಿ ಹೇಳಿದ್ದಳು. ಇದರಿಂದ ಕುಪಿತಗೊಂಡ ಗಿರೀಶ್ ಬಾಬು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಆರೋಪಿ ಗಿರೀಶ್ಬಾಬುವನ್ನು ಪಾವಗಡ ಪೊಲೀಸರು ಬಂಧಿಸಿದ್ದಾರೆ.
Comments are closed.