ಕರ್ನಾಟಕ

ಯುವತಿಯನ್ನು ಸಿನಿಮೀಯ ರೀತಿಯಲ್ಲಿ ಅಪಹರಿಸಿ ನಡುದಾರಿಯಲ್ಲಿ ಬಿಟ್ಟು ಪರಾರಿಯಾದ ಯುವಕ

Pinterest LinkedIn Tumblr


ಶಿವಮೊಗ್ಗ: ಯುವಕನೊಬ್ಬ ಸಿನಿಮೀಯ ರೀತಿಯಲ್ಲಿ ಹುಡುಗಿಯನ್ನು ಆಕೆಯ ಮನೆಯಿಂದಲೇ ಅಪಹರಿಸಿ ನಡುದಾರಿಯಲ್ಲಿ ಬಿಟ್ಟು ಪರಾರಿಯಾದ ಘಟನೆ ತೀರ್ಥಹಳ್ಳಿ ಪಟ್ಟಣದ ಕುರುವಳ್ಳಿ ಎಂಬಲ್ಲಿ ನಡೆದಿದೆ.

ನಾಗರಾಜ್ ತನ್ನ ಸ್ನೇಹಿತರೊಂದಿಗೆ ಸೇರಿ ಯುವತಿಯನ್ನು ಅಪಹರಿಸಿದಾತ.ಕುರುವಳ್ಳಿಯ ನಾಗರಾಜ್ ಯಡೂರಿನ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ ಯುವತಿ ಈತನ ಪ್ರೀತಿಯನ್ನು ನಿರಾಕರಿಸಿದ್ದಳು.

ಈ ಹಿನ್ನೆಲೆಯಲ್ಲಿ ಇಂದು ನಾಗರಾಜ್ ತನ್ನ ಸ್ನೇಹಿತನ ರಿಟ್ಜ್ ಕಾರಿನ ನಂಬರ್ ಪ್ಲೇಟ್ ತೆಗೆದು ಯುವತಿಯನ್ನು ಅಪಹರಿಸಲು ಪ್ಲಾನ್ ಮಾಡಿದ್ದಾನೆ.

ತಾನು ಮಾಡಿಕೊಂಡ ಪ್ಲಾನ್ ನಂತೆಯೇ ತನ್ನ ಸ್ನೇಹಿತರೊಂದಿಗೆ ಸೇರಿ ಯುವತಿಗೆ ಲಾಂಗ್ ತೋರಿಸಿ ಹೆದರಿಸಿ ಯುವತಿಯನ್ನು ಯಡೂರಿನಿಂದಲೇ ಅಪಹರಿಸಿದ್ದಾನೆ.

ಈ ವಿಷಯ ತಿಳಿದ ಯುವತಿ ಮನೆಯವರು ಸ್ಕಾರ್ಪಿಯೋ ಕಾರಿನಲ್ಲಿ ಹಿಂಬಾಲಿಸಲಾರಂಭಿಸಿದ್ದಾರೆ.

ಇದರಿಂದ ಭಯಗೊಂಡ ನಾಗರಾಜ್ ಹಾಗೂ ಆತನ‌ ಸ್ನೇಹಿತರು ಯಡೂರು ಸಮೀಪದ‌ ಕಾಸರವಳ್ಳಿ ಗ್ರಾಮದ ಬಳಿ ಕಾರು ಹಾಗೂ ಯುವತಿಯನ್ನು ಬಿಟ್ಟು ಪರಾರಿಯಾಗಿದ್ದಾರೆ.

ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.