ಕರ್ನಾಟಕ

ಗಮನ ಸೆಳೆದ “ದಸರಾ ಸೈಕ್ಲೋಥಾನ್” ಗೆ ಚಾಲನೆ.

Pinterest LinkedIn Tumblr

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಇಂದು ಬೆಳಗ್ಗೆ ಕ್ರೀಡಾ ಉಪಸಮಿತಿಯಿಂದ ಅಯೋಜಿಸಿರುವ ಸೈಕ್ಲೋಥಾನ್ ಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಬನ್ನೂರ್ ಜಂಕ್ಷನ್ ಬಳಿ ಚಾಲನೆ ನೀಡಿದ್ದಾರೆ.

ಸ್ಪರ್ಧೆಯಲ್ಲಿ ಸುಮಾರು 180 ಸ್ಪರ್ಧಿಗಳು ಭಾಗಿಯಾಗಿದ್ದು, 100 ಕಿ.ಮೀ ಸೈಕಲ್ ಸವಾರಿ ಇದೆ. ಬನ್ನೂರ್ ಜಂಕ್ಷನ್ ನಿಂದ ಪ್ರಾರಂಭಿಸಿ ಟಿ. ನರಸೀಪುರ ಮೂಲಕ ಮೂಗೂರು ತಲುಪಿ ಮತ್ತೆ ವಾಪಸ್ ಅದೇ ಮಾರ್ಗದಲ್ಲಿ ಬಂದು ಲಲಿತಾದ್ರಿಪುರ ಮೂಲಕ ಚಾಮುಂಡಿ ಬೆಟ್ಟದ ದೇವಿಕೆರೆಯಲ್ಲಿ ಅಂತ್ಯವಾಗಲಿದೆ.

ಇನ್ನು 80 ಮಹಿಳಾ ಸ್ಪರ್ಧಿಗಳು ಮೂಗೂರಿನೀಂದ ಸೈಕಲ್ ಸವಾರಿ ಆರಂಭಿಸಿ ಚಾಮುಂಡಿ ಬೆಟ್ಟದ ದೇವಿಕೆರೆ ತನಕ ಒಟ್ಟು ಕಿ.ಮೀ. ತಲುಪಲಿದ್ದಾರೆ. ಸ್ಪರ್ಧೆಯಲ್ಲಿ ಗೆದ್ದವರಿಗೆ ಪ್ರಥಮ ಬಹುಮಾನ 30 ಸಾವಿರ, ದ್ವಿತೀಯ ಬಹುಮಾನ 25 ಸಾವಿರ, ತೃತೀಯ ಬಹುಮಾನ 20 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು.

Comments are closed.