ಕರ್ನಾಟಕ

ಸಾಲದ ಸುಳಿಯಲ್ಲಿ ರಮೇಶ್‌ ಜಾರಕಿಹೊಳಿ: ಸತೀಶ್‌ ಜಾರಕಿಹೊಳಿ

Pinterest LinkedIn Tumblr


ಬೆಳಗಾವಿ: ರಮೇಶ ಜಾರಕಿಹೊಳಿ ಈಗಾಗಲೇ ಖಾಲಿಯಾಗಿದ್ದಾರೆ. ನಾನು ಸಾಲದ ಸುಳಿಯಲ್ಲಿ ಇದ್ದೇನೆ ಎಂದು ಸ್ವತಃ ರಮೇಶ ಅವರೇ ಹೇಳಿದ್ದಾರೆ ಎಂದು ಕಾಂಗ್ರೆಸ್‌ ನಾಯಕ, ರಮೇಶ್‌ ಜಾರಕಿಹೊಳಿ ಸಹೋದರ ಸತೀಶ್‌ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಮೇಶ ಜಾರಕಿಹೊಳಿ ಹೆಸರು ಸಹ ಇ ಡಿ ವಿಚಾರಣೆಯ ಪ್ರಸ್ತಾಪದಲ್ಲಿದೆ ಎಂಬ ಪ್ರಶ್ನೆಗೆ ಉತ್ತರ ನೀಡಿ ಈ ಮಾತನ್ನು ಹೇಳಿದರು.

ಕಾಂಗ್ರೆಸ್ ನಾಯಕರ ಮೇಲೆ ಉದ್ದೇಶ ಪೂರ್ವಕವಾಗಿ ಇ ಡಿ ಹಾಗೂ ದಾಳಿ ನಡೆಯುತ್ತಿದೆ ಎಂದು ಶಾಸಕ ಸತೀಶ್ ಜಾರಕಿಹೊಳಿ ಆರೋಪ ಮಾಡಿದರು.

ಇದು ರಾಜಕೀಯ ಪ್ರೇರಿತ ದಾಳಿ. ಕಾಂಗ್ರೆಸ್ ಗುರಿಯಾಗಿಟ್ಟುಕೊಂಡು ದಾಳಿ ಮಾಡಲಾಗುತ್ತಿದೆ ಎಂದರು. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು. ಅದರಲ್ಲಿ ಎರಡು ಮಾತಿಲ್ಲ. ಡಿ ಕೆ ಶಿವಕುಮಾರ ಸಮರ್ಥವಾಗಿ ವಿಚಾರಣೆ ಎದುರಿಸುತ್ತಿದ್ದಾರೆ ಎಂದು ಹೇಳಿದರು.

ಹೆಬ್ಬಾಳಕರ ಅವರ ಮೇಲೆ ಇ ಡಿ ವಿಚಾರಣೆ ನಡೆಯುತ್ತಿರುವ ಬಗ್ಗೆ ತಮಗೆ ಹೆಚ್ಚಿನ ಮಾಹಿತಿ ಇಲ್ಲ ಎಂದರು.

Comments are closed.