ಕರ್ನಾಟಕ

ಮಂಡ್ಯದಲ್ಲೂ ಮುಂದುವರಿದ ವೆಂಕಟ್ ಹುಚ್ಚಾಟ; ಕಾರಿಗೆ ಕಲ್ಲು ಎತ್ತಿ ಹಾಕಿ ದಾಂಧಲೆ ನಡೆಸಿದ್ದಕ್ಕೆ ಬಿತ್ತು ಹುಚ್ಚ ವೆಂಕಟ್‍ಗೆ ಗೂಸ

Pinterest LinkedIn Tumblr

ಮಂಡ್ಯ: ನಾಲ್ಕೈದು ದಿನಗಳ ಹಿಂದೆ ಮಡಿಕೇರಿಯಲ್ಲಿ ವ್ಯಕ್ತಿಯೊಬ್ಬರ ಕಾರಿಗೆ ಕಲ್ಲು ಎತ್ತಿಹಾಕಿ ಸಾರ್ವಜನಿಕರಿಂದ ಥಳಿತಕ್ಕೊಳಗಾಗಿದ್ದ ನಟ ಹುಚ್ಚ ವೆಂಕಟ್ ಅವರ ಹುಚ್ಚಾಟ ಮಂಡ್ಯದಲ್ಲೂ ಮುಂದುವರಿದಿದೆ.

ಕಳೆದೆರಡು ದಿನಗಳಿಂದಲೂ ನಗರದ ಹೊರವಲಯದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಹೋಟೆಲಿನಲ್ಲಿ ರೂಂ ಬುಕ್ ಮಾಡಿಕೊಂಡು ವಾಸ್ತವ್ಯವಿದ್ದ ಹುಚ್ಚ ವೆಂಕಟ್, ಭಾನುವಾರ ಬೆಳಗ್ಗೆ ಜೊತೆಯಲ್ಲಿ ಬಂದಿದ್ದ ವ್ಯಕ್ತಿಯೊಬ್ಬರಿಗೆ ಕಾರಿಗೆ ಕಲ್ಲು ಎತ್ತಿ ಹಾಕಿದ್ದಾರೆ ಇದರಿಂದ ಕಾರಿನ ಗಾಜುಗಳು ಪುಡಿಪುಡಿಯಾಗಿವೆ. ಹೀಗಾಗಿ ಸಾರ್ವಜನಿಕರು ಅವರಿಗೆ ಧರ್ಮದೇಟು ನೀಡಿದ್ದಾರೆ.

ಮಡಿಕೇರಿಯಲ್ಲಿ ಗುರುವಾರ ದಾಂಧಲೆ ನಡೆಸಿದ್ದ ಹುಚ್ಚ ವೆಂಕಟ್‌ ಶುಕ್ರವಾರ ಕುಶಾಲನಗರದಲ್ಲೂ ದುಂಡಾವರ್ತನೆ ತೋರಿದ್ದರು.

ಕುಶಾಲನಗರಕ್ಕೆ ಆಗಮಿಸಿದ ವೆಂಕಟ್‌ ಕೊಪ್ಪ ಗೇಟ್‌ ಸಮೀಪದ ಲಾಡ್ಜ್‌ವೊಂದರಲ್ಲಿಅಸಹಾಯಕತೆ ವ್ಯಕ್ತಪಡಿಸಿ ರೂಂ ಪಡೆದುಕೊಂಡಿದ್ದರು. ರಾಜ್ಯ ಹೆದ್ದಾರಿಯಲ್ಲಿಕೆಲಕಾಲ ಅಡ್ಡಾಡಿದ ವೆಂಕಟ್‌ನನ್ನು ಕಂಡು ಜನ ಹೆಚ್ಚಿನ ಸಂಖ್ಯೆಯಲ್ಲಿಸೇರತೊಡಗಿದಾಗ ಆತನ ವರ್ತನೆ ಬದಲಾಯಿತು. ಇದರಿಂದ ಕಸಿವಿಸಿಗೊಂಡ ಲಾಡ್ಜ್‌ ಮಾಲೀಕ, ಆದಷ್ಟು ಬೇಗ ರೂಂ ಖಾಲಿ ಮಾಡುವಂತೆ ಕೋರಿದಾಗ ಅವರ ವಿರುದ್ಧವೇ ವೆಂಕಟ್‌ ಆಕ್ರೋಶ ವ್ಯಕ್ತಪಡಿಸಿದ್ದರು.

ಲಾಡ್ಜ್‌ ಮಾಲೀಕ ಸಂತೋಷ್‌ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಪೊಲೀಸರು ಗುಂಪುಗೂಡಿದ್ದ ಸಾರ್ವಜನಿಕರನ್ನು ಚದುರಿಸಿದರು. ಪೊಲೀಸ್‌ ಸಿಬ್ಬಂದಿ ವಿರುದ್ಧವೂ ಹರಿಹಾಯ್ದ ವೆಂಕಟ್‌ ಮಾಧ್ಯಮದವರೊಂದಿಗೆ ಮಾತನಾಡಿ, ”ತಾನು ಚೆನ್ನೆನಲ್ಲಿದ್ದ ಸಂದರ್ಭ ಯಾರೋ ನನ್ನನ್ನು ಬೆಂಗಳೂರಿನ ಯಶವಂತಪುರಕ್ಕೆ ಕರೆತಂದು ಬಿಟ್ಟು ಹೋದರು. ನಾನು ಅತಿ ಹೆಚ್ಚು ಇಷ್ಟಪಡುವ ಮಡಿಕೇರಿಗೆ ಆಗಮಿಸಿದಾಗ ಹುಚ್ಚ ವೆಂಕಟ್‌ ಎಂದು ತನ್ನನ್ನು ಸಂಬೋಧಿಸಿದ್ದರಿಂದ ಕೋಪ ಬಂತು. ನನ್ನ ಹೆಂಡತಿಯನ್ನು ಹೊರತುಪಡಿಸಿ ಬೇರೆ ಯಾರೂ ಹುಚ್ಚ ವೆಂಕಟ್‌ ಎಂದು ಕರೆಯಬಾರದು. ಅಣ್ಣಾ ಎಂದು ಕರೆಯಬೇಕು. ನನ್ನ ಬಳಿ ಇರುವುದು ಕೇವಲ 300 ರೂ. ಆದರೆ, ಹಲವರು ನನ್ನ ಬಳಿ ಲಕ್ಷಗಟ್ಟಲೆ ಹಣವಿದೆಯೆಂದು ಕಥೆ ಕಟ್ಟುತ್ತಿದ್ದಾರೆ” ಎಂದರು.

ಪೊಲೀಸ್‌ ವೃತ್ತ ನಿರೀಕ್ಷಕರು ಬಂದು ಆತನನ್ನು ಸಮಾಧಾನಪಡಿಸಿ ಕಳುಹಿಸಲು ಮುಂದಾದರೂ ವೆಂಕಟ್‌ ರೂಂನಿಂದ ಕದಲಲಿಲ್ಲ. ನನಗೆ ಹಂದಿ ಮಾಂಸ ಬೇಕು ಎಂದು ಬೇಡಿಕೆಯಿಟ್ಟ. ಲಾಡ್ಜ್‌ನವರು ಮುದ್ದೆ ಮತ್ತು ಹಂದಿ ಮಾಂಸ ತರಿಸಿ, ಊಟ ಮಾಡಿಸಿ ಸಾಗ ಹಾಕಲು ಯತ್ನಿಸಿದರೂ ಸಫಲವಾಗಲಿಲ್ಲ. ಕಾರಿಗೆ ಪೆಟ್ರೋಲ್‌ ತುಂಬಿಸಿ, ಖರ್ಚಿಗೂ ಹಣ ನೀಡುತ್ತೇವೆ. ಹೊರಡಿ” ಎಂದು ಲಾಡ್ಜ್‌ ಮಾಲೀಕರು ಹೇಳಿದರೂ ಜಗ್ಗದಿದ್ದಾಗ ಅನಿವಾರ್ಯವಾಗಿ ಎಸ್ಪಿ ಮೊರೆ ಹೋಗಬೇಕಾಯಿತು.

ಮತ್ತೆ ಬಂದ ವೃತ್ತ ನಿರೀಕ್ಷಕರು ಮತ್ತು ಪೊಲೀಸ್‌ ಸಿಬ್ಬಂದಿ ನಾಜೂಕಾಗಿ ಆತನನ್ನು ಕಳುಹಿಸಿಕೊಡಲು ಯತ್ನಿಸಿದರು. ಆದರೆ, ವೆಂಕಟ್‌ನ ಅತಿರೇಕದ ವರ್ತನೆಯಿಂದ ಬೇರೆ ದಾರಿ ಕಾಣದೆ ಬಲವಂತವಾಗಿ ರೂಮಿನಿಂದ ಹೊರ ಕಳುಹಿಸಬೇಕಾಯಿತು.

ಆತನ ಕಾರಿಗೆ ಲಗೇಜ್‌ ತುಂಬಿಸಿ ಕಾರು ಸ್ಟಾರ್ಟ್ ಮಾಡಲು ಮುಂದಾದಾಗ ಕಾರಿನ ಲ್ಲಿಪೆಟ್ರೋಲ್‌ ಖಾಲಿಯಾಗಿತ್ತು. ಕಾರಿಗೆ ಪೆಟ್ರೋಲ್‌ ತುಂಬಿಸಿ, ಪೊಲೀಸ್‌ ಜೀಪ್‌ನಲ್ಲಿವೆಂಕಟ್‌ನನ್ನು ಕೂರಿಸಿ ಕೊಡಗು ಗಡಿಯಾಚೆ ಸಾಗಿಸಿ ಮೈಸೂರಿನತ್ತ ಕಳುಹಿಸಿಕೊಡಲಾಯಿತು. ಅಲ್ಲಿಂದ ವೆಂಕಟ್ ಮಂಡ್ಯದ ಕಡೆಗೆ ಬಂದಿದ್ದಾರೆ.

Comments are closed.