
ಬೀದರ: ಜೆಡಿಎಸ್ ಪಕ್ಷದೊಂದಿಗೆ ಸೇರಿ ರಚಿಸಿದ ಮೈತ್ರಿ ಸರ್ಕಾರದಿಂದ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಹಾನಿಯಾಗಿದೆ ಎಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಅಶೋಕ್ ಖೇಣಿ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ತಮ್ಮ ಗೃಹದಲ್ಲಿ ಶುಕ್ರವಾರ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಪಕ್ಷದ ಪ್ರಮುಖ ದೇವೇಗೌಡ ಹಾಗೂ ಕುಟುಂಬದವರ ತೀವ್ರ ಹಸ್ತಕ್ಷೆಪದಿಂದಾಗಿ ಮೈತ್ರಿ ಸರ್ಕಾರ ಪತನವಾಯಿತು.
ದೇವೇಗೌಡರ ಸೊಸೆಯಂದಿರು, ಅಡುಗೆ ಭಟ್ಟರು ಕೂಡ ಇಲಾಖೆಗಳ ಉಸ್ತುವಾರಿ ವಹಿಸಿಕೊಂಡಿದ್ದರು. ಮೈತ್ರಿ ಉರುಳಲು ಗೌಡರ ಕುಟುಂಬವೇ ಮುಖ್ಯ ಕಾರಣ ಎಂದು ನೇರವಾಗಿ ಖೇಣಿ ವಾಗ್ದಾಳಿ ನಡೆಸಿದರು.
ಮೈತ್ರಿ ರಚನೆಯಿಂದ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಭಾರೀ ಹೊಡೆತ ಬಿದ್ದಿದೆ. ಇದಕ್ಕೆ ಜೆಡಿಎಸ್ನೊಂದಿಗಿನ ಮೈತ್ರಿಯೇ ಕಾರಣ ಎನ್ನುವುದು ಈಗ ಸ್ಪಷ್ಟ. ಸದ್ಯ ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ.
ಸಿದ್ದರಾಮಯ್ಯ ಓರ್ವ ಪ್ರಾಮಾಣಿಕ ರಾಜಕಾರಣಿ. ದೇವೇಗೌಡರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರೂ ಯಾರೊಬ್ಬ ನಾಯಕರು ಸಿದ್ದರಾಮಯ್ಯಗೆ ಬೆಂಬಲವಾಗಿ ನಿಲ್ಲುತ್ತಿಲ್ಲ. ಡಿಕೆ ಶಿವಕುಮಾರ್ ವಿಷಯದಲ್ಲೂ ಹೀಗೆ ಆಗುತ್ತಿದೆ. ಡಿಕೆಶಿ ಪಕ್ಷಕ್ಕೆ ಸದಾ ಬೆಂಬಲವಾಗಿ ನಿಂತವರು ಎಂದರು.
ತುಮಕೂರು – ಬೆಂಗಳೂರು ರಸ್ತೆಯಿಂದ ವಿಮಾನ ನಿಲ್ದಾಣಕ್ಕೆ ಹೋಗಲು ಪ್ರತ್ಯೇಕ ರಸ್ತೆ ನಿರ್ಮಿಸಿದರೆ ಬೆಂಗಳೂರಿನ ಪ್ರಮುಖ ಮೂರು ರಸ್ತೆಗಳ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಸಾಧ್ಯವಾಗಲಿದೆ. ಈ ಬಗ್ಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಭೇಟಿ ಮಾಡಿ ಮನವರಿಕೆ ಮಾಡಿಕೊಟ್ಟಿದ್ದೆನೆ ಎಂದು ತಿಳಿಸಿದರು.
ಕಳೆದೊಂದು ವರ್ಷದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕ್ಷೆತ್ರದ ಶಾಸಕ ಬಂಡೆಪ್ಪಾ ಖಾಸೆಂಪೂರ್ ಹೇಳಿಕೊಳ್ಳುವ ಯಾವ ಕೆಲಸವೂ ಮಾಡಿಲ್ಲ ಎಂದು ಜನರು ಆರೋಪಿಸುತ್ತಿದ್ದಾರೆ. ಖಾಸೆಂಪೂರ್ ಕ್ಷೆತ್ರಕ್ಕೆ ಏನನ್ನೂ ಮಾಡಿಲ್ಲ. ಮೂಲಭೂತ ಸೌಕರ್ಯಗಳ ಕೊರತೆಯು ಎದ್ದು ಕಾಣುತ್ತಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಕ್ಷೆತ್ರದ ಮತದಾರರು ತಮ್ಮ ಬಳಿ ನೋವು ತೋಡಿಕೊಳ್ಳುತ್ತಿದ್ದಾರೆ. ತಮ್ಮನ್ನು ಸೋಲಿಸಿದ್ದಕ್ಕಾಗಿ ಮತದಾರರಿಗೂ ಪಾಪಪ್ರಜ್ಞೆ ಕಾಡುತ್ತಿದೆ. ಆದರೆ, ತಾವು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಕ್ಷೆತ್ರದ ಜನರ ಕಷ್ಟ-ಸುಖಃದಲ್ಲಿ ಯಾವತ್ತಿಗೂ ಭಾಗಿಯಾಗುತ್ತೆÃನೆ ಎಂದು ಹೇಳಿದರು.
ಇತ್ತಿಚೆಗೆ ನೂತನವಾಗಿ ಸಚಿವರಾದ ಲಕ್ಷ್ಮಣ ಸವದಿ, ವಿ.ಸೋಮಣ್ಣಾ, ಗೋವಿಂದ ಕಾರಜೋಳ್, ಡಾ| ಅಶ್ವತ್ ನಾರಾಯಣ ಅವರನ್ನು ಭೇಟಿ ಮಾಡಿ ಕ್ಷೆತ್ರಕ್ಕೆ ಹೆಚ್ಚುವರಿ ಅನುದಾನ ಕಲ್ಪಿಸಿ ಎಂದು ಕೋರಿದ್ದೆನೆ. ಕ್ಷೆತ್ರದ ವ್ಯಾಪ್ತಿಯ 35 ಗ್ರಾಮ ಪಂಚಾಯತ್ಗಳಿಗೆ ಪಕ್ಷದಿಂದ ಕಾರ್ಯಕರ್ತರನ್ನು ನೇಮಕಗೊಳಿಸಿ ಅಲ್ಲಿನ ಸಮಸ್ಯೆಗಳನ್ನು ಜಿಲ್ಲಾಡಳಿತ ಹಾಗೂ ಸರ್ಕಾರದ ಗಮನಕ್ಕೆ ತರುವ ಇರಾದೆ ಇದೆ. ತಾವು ಶಾಸಕರಾಗಿದ್ದಾಗ ಕ್ಷೆತ್ರದ ಎಲ್ಲಾ ಕಡೆಗಳಲ್ಲಿ ನಿರಂತರ ವಿದ್ಯುತ್, ಕುಡಿಯುವ ನೀರು, ರಸ್ತೆ ಸಂಪರ್ಕದ ಸವಲತ್ತು ಇತ್ತು. ಆದರೆ, ಈಗ ಮೂಲಭೂತ ಸೌಕರ್ಯಗಳಿಗಾಗಿ ಜನರು ಪರದಾಡಬೇಕಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಬೀದರ್ ದಕ್ಷಿಣ ಕ್ಷೆತ್ರದ ಕಾಂಗ್ರೆಸ್ ಘಟಕದ ಅಧ್ಯಕ್ಷ ಚನ್ನಶೆಟ್ಟಿ, ರುಕ್ಮಾರೆಡ್ಡಿ ಪಾಟೀಲ್ ಉಪಸ್ಥಿತರಿದ್ದರು.
Comments are closed.