ಕರ್ನಾಟಕ

ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ ತಂದೆ ಗಂಗಯ್ಯ ಹೆಗ್ಡೆ ವಿಧಿವಶ

Pinterest LinkedIn Tumblr


ಚಿಕ್ಕಮಗಳೂರು(ಆ.25): ಕೆಲವು ದಿನಗಳ ಹಿಂದೆ ನಿಧನರಾಗಿದ್ದ ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ ಅವರ ತಂದೆ ಗಂಗಯ್ಯ ಹೆಗ್ಡೆ ಇಂದು ವಿಧಿವಶರಾಗಿದ್ದಾರೆ.

ಕೋಮಾ ಸ್ಥಿತಿಯಲ್ಲಿದ್ದ ಗಂಗಯ್ಯ ಹೆಗ್ಡೆ ಮೈಸೂರಿನ ಶಾಂತವೇರಿ ಗೋಪಾಲಗೌಡ ಆಸ್ಪತ್ರೆಯಲ್ಲಿ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಕೃತಕ ಉಸಿರಾಟದ ವ್ಯವಸ್ಥೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮಧ್ಯಾಹ್ನ 3 ಗಂಟೆಗೆ ಮೃತಪಟ್ಟಿದ್ದಾರೆ.

ಮಗ ಮರಣ ಹೊಂದಿದ ತಿಂಗಳ ಒಳಗೆ ತಂದೆ ಗಂಗಯ್ಯ ಹೆಗ್ಡೆ ನಿಧನರಾಗಿದ್ಧಾರೆ. ಉದ್ಯಮಿ ಸಿದ್ದಾರ್ಥ ಹೆಗ್ಡೆ ತಂದೆ ಗಂಗಯ್ಯ ಹೆಗ್ಡೆ ಅವರಿಗೆ 96 ವರ್ಷ ವಯಸ್ಸಾಗಿತ್ತು. ಮಗ ಉದ್ಯಮಿ ಸಿದ್ದಾರ್ಥ ಹೆಗ್ಡೆ ಸಾವಿನ ವಿಚಾರವೂ ಗಂಗಯ್ಯ ಅವರಿಗೆ ಗೊತ್ತಿರಲಿಲ್ಲ.

ಮಗ ಸಿದ್ದಾರ್ಥ ಹೆಗ್ಡೆ ಕಳೆದ ತಿಂಗಳು 29ರಂದು ಮಂಗಳೂರಿನಲ್ಲಿ ಉಳ್ಳಾಲ ಸೇತುವೆ ಮೇಲಿಂದ ನಾಪತ್ತೆ ಆಗಿದ್ದರು. ಆತ್ಮಹತ್ಯೆಗೆ ಶರಣಾಗಿ ಮರುದಿನ ನೇತ್ರಾವತಿ ನದಿಯಲ್ಲಿ ಸಿದ್ದಾರ್ಥ ಶವ ಪತ್ತೆ ಆಗಿತ್ತು. ಕಳೆದ ತಿಂಗಳು 31 ರಂದು ಸ್ವಗ್ರಾಮ ಮೂಡಿಗೆರೆಯ ಚೇತನಹಳ್ಳಿಎಸ್ಟೇಟ್ ನಲ್ಲಿ ಅಂತ್ಯಕ್ರಿಯೆ ನಡೆದಿತ್ತು.

ಸಿದ್ದಾರ್ಥ ಅವರ ತಂದೆಯ ಅಂತ್ಯಕ್ರಿಯೆ ನಾಳೆ ಚೇತನಹಳ್ಳಿ ಎಸ್ಟೇಟ್ ನಲ್ಲಿ ನಡೆಯಲಿದೆ. ಗಂಗಯ್ಯ ಹೆಗ್ಡೆ ಪಾರ್ಥಿವ ಶರೀರವನ್ನು ಚಿಕ್ಕಮಗಳೂರಿಗೆ ರವಾನೆ ಮಾಡಲು ಸಿದ್ದತೆ ನಡೆಸಲಾಗಿದೆ. ಸಿದ್ದಾರ್ಥ್‌ ಹೆಗಡೆ ಕುಟುಂಬಸ್ಥರು ಆಸ್ಪತ್ರೆಗೆ ಆಗಮಿಸಿದ್ದಾರೆ. ಇನ್ನು ಕೆಲವೇ ಕ್ಷಣಗಳಲ್ಲಿ ಮೈಸೂರಿನಿಂದ ಚಿಕ್ಕಮಗಳೂರಿಗೆ ಗಂಗಯ್ಯ ಹೆಗ್ಡೆ ಪಾರ್ಥಿವ ಶರೀರ. ರವಾನೆಯಾಗಲಿದೆ.

ಆಸ್ಪತ್ರೆಯಲ್ಲಿ ಆಪ್ತರಿಗಷ್ಟೇ ಅಂತಿಮ ದರ್ಶನ ಪಡೆಯಲು ಅವಕಾಶ ನೀಡಲಾಗಿದೆ. ನೇರವಾಗಿ ಚಿಕ್ಕಮಗಳೂರಿನ ನಿವಾಸಕ್ಕೆ ಪಾರ್ಥಿವ ಶರೀರ ರವಾನೆಯಾಗಲಿದೆ. ವಿಶೇಷ ಅಂಬ್ಯುಲೆನ್ಸ್‌ ಮೂಲಕ ಗಂಗಯ್ಯಹೆಗಡೆ ಪಾರ್ಥಿವ ಶರೀರ ರವಾನೆ ಮಾಡಲು ಸಿದ್ದತೆ ಮಾಡಲಾಗುತ್ತಿದೆ.

Comments are closed.