ಬೆಂಗಳೂರು: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ಸರ್ಕಾರ ಆರ್ಥಿಕ ಬರ ಉಂಟಾಗಿರುವ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜಾರಿಗೆ ತಂದಿದ್ದ ಕನಸಿನ ಅನ್ನಭಾಗ್ಯ ಯೋಜನೆಗೆ ಕತ್ತರಿಹಾಕಲು ಬಿಜೆಪಿ ಸರ್ಕಾರ ತೀರ್ಮಾನ ಮಾಡಿದೆ.
ರಾಜ್ಯದಲ್ಲಿ ಕಮಲ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು 4 ಸಾವಿರ ಘೋಷಣೆ ಮಾಡಿದ್ದಾರೆ, ಕೇಂದ್ರದ ಆರು ಸಾವಿರಕ್ಕೆ ರಾಜ್ಯದ 4 ಸಾವಿರ ಹೆಚ್ಚುವರಿಯಾಗಿ ಹಣವು ಕೂಡ ಸೇರಿದೆ.
ಸದ್ಯ ಈ ಘೋಷಣೆಯಿಂದಾಗಿ ಸರ್ಕಾರದ ಮೇಲೆ 2200 ಕೋಟಿ ರೂಪಾಯಿ ಹೊರೆ ಆಗಲಿದೆ, ಹೀಗಾಗಿ ಆರ್ಥಿಕ ಇಲಾಖೆಯೂ ಈ ಹೊರೆಯನ್ನು ಸರಿದೂಗಿಸುವುದು ಕಷ್ಟವೆಂದಿದ್ದು, ಯೋಜನೆ ಜಾರಿ ಆಗಲೇಬೇಕೆಂದರೆ ಅನ್ನಭಾಗ್ಯಕ್ಕೆ ಯೋಜನೆಗೆ ಕತ್ತರಿ ಹಾಕಬೇಕಾದ ಅಗತ್ಯವಿದೆ ಎಂದು ಹಣಕಾಸು ಇಲಾಖೆ ಸಿಎಂಗೆ ತಿಳಿಸಿತ್ತು.
ಇನ್ನು 2 ಕೆ.ಜಿ ಅಕ್ಕಿ, 1 ಕೆ.ಜಿ ಬೆಳೆ ಕಡಿತ ಮಾಡಿದರೆ 500 ಕೋಟಿ ಉಳಿತಾಯವಾಗಲಿದೆ, ಆಗ ಸ್ವಲ್ಪ ಮಟ್ಟಿಗಾದರು ನಿಮ್ಮ ಯೋಜನೆ ಸರಿದೂಗಿಸಬಹುದು ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಸಲಹೆ ನೀಡಿದ್ದಾರೆ. ಹಿಂದೆ ವಿತರಣೆ ಮಾಡುತ್ತಿದ್ದ 7 ಕೆ.ಜಿ ಅಕ್ಕಿಯಲ್ಲಿ 2 ಕೆ.ಜಿ ಕಡಿತಗೊಳಿಸಿ 5 ಕೆ.ಜಿ ನೀಡುವ ಸಾಧ್ಯತೆ ಇದೆ.
Comments are closed.