ಕರ್ನಾಟಕ

ಅನರ್ಹ ಶಾಸಕ ರೋಷನ್​ ಬೇಗ್​ಗೆ ಬಿಜೆಪಿಯಿಂದ ಬಿಗ್​ ಶಾಕ್​​!

Pinterest LinkedIn Tumblr


ಬೆಂಗಳೂರು: ಶಿವಾಜಿನಗರ ಕ್ಷೇತ್ರದ ಕಾಂಗ್ರೆಸ್​ ಅನರ್ಹ ಶಾಸಕ ರೋಷನ್​ ಬೇಗ್ ಅವರು ತ್ರಿಶಂಕು ಪರಿಸ್ಥಿತಿಗೆ ಸಿಲುಕಿದ್ರಾ(?) ಎಂಬ ಅನುಮಾನಗಳು ಮೂಡುತ್ತಿದ್ದು, ಬಿಜೆಪಿಯತ್ತ ಹೋಗಲು ರೋಷನ್ ಬೇಗ್ ಮೀನಾಮೇಷ ಏಣಿಸುತ್ತಿರುವುದೇ ಇದೇ ಈ ಅನುಮಾನಕ್ಕೆ ಕಾರಣವಾಗಿದೆ.

ಈ ಹಿಂದೆ ಇದ್ದ ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಸರ್ಕಾರವನ್ನು ರಾಜೀನಾಮೆ ನೀಡುವ ಮೂಲಕ ಉರುಳಿಸಿದ್ದರು. ಅಷ್ಟೇ ಅಲ್ಲದೇ ಬಳಿಕ ಬಿಜೆಪಿಗೆ ಹೋಗಲು ಮಾತುಕತೆಯನ್ನು ಕೂಡ ನಡೆಸಿದ್ದರು ಆದರೆ ರೋಷನ್​​ ಬೇಗ್ ಮೊದಲ ಮನವಿಗೆ ಬಿಜೆಪಿ ಡೋಂಟ್ ಕೇರ್ ಎಂದಿದೆ.

ನೀವು ರಿಸೈನ್ ಮಾಡಿ ಸರ್ಕಾರವನ್ನೇನೋ ಉರುಳಿಸಿದಿರಿ, ಹಾಗಂತ ಅಂತ ನಿಮ್ಮ ಎಲ್ಲಾ ಮಾತನ್ನು ಕೇಳೋಕೆ ಆಗುತ್ತಾ(?) ಎಂದು ಕೈ ಅನರ್ಹ ರೋಷನ್ ಬೇಗ್​ಗೆ ಪರೋಕ್ಷವಾಗಿ ಭಾರತೀಯ ಜನತಾ ಪಾರ್ಟಿ ಟಾಂಗ್ ಕೊಟ್ಟಿದೆ.

ಅದುವಲ್ಲದೇ ಸೋಮವಾರ ಮುಸ್ಲಿಂ ಭಾಂದವರ ಬಕ್ರಿದ್​​ ಹಬ್ಬದ ಹಿನ್ನೆಲೆಯಲ್ಲಿ ಕೂರ್ಬಾನಿಗೆ ಅವಕಾಶ ನೀಡುವಂತೆ ರೋಷನ್​ ಬೇಗ್​ ಅವರು ಪತ್ರ ಬರೆದಿದ್ದರು ಇದನ್ನು ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪ ಅವರಿಗೆ ರವಾನಿಸಲಾಗಿತ್ತು ಆದರೆ ಬಿಜೆಪಿಯೂ ಗೋಹತ್ಯೆ ಮಾಡದಂತೆ ಪೊಲೀಸ್ ಆಯುಕ್ತರಿಗೆ ದೂರು ನೀಡಿದೆ.

ಹೀಗಾಗಿ ಅನರ್ಹ ಶಾಸಕ ರೋಷನ್​ ಬೇಗ್ ಅವರು ಸಂದಿಗ್ಧ ಪರಿಸ್ಥಿತಿ ಸಿಲುಕಿದ್ದಾರೆ ಇತ್ತ ಸಮುದಾಯದ ಕೆಂಗಣ್ಣಿಗೂ ಗುರಿಯಾಗಿದ್ದು ಅತ್ತ ಬಿಜೆಪಿಗೆ ಹೋದರೆ ಮತ್ತಷ್ಟು ಕಷ್ಟ ಎಂಬ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಸದ್ಯ ರೋಷನ್​ ಬೇಗ್​ ಅವರು ಬಿಜೆಪಿಯತ್ತ ಮುಖ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಅತ್ತ ಪಕ್ಷದಲ್ಲೇ ಉಳಿಯಲು ಉಚ್ಚಾಟನೆಯ ಶಿಕ್ಷೆ ಆಗಿದೆ ಹೀಗಾಗಿ ಗೊಂದಲದ ಅವರು ಪರಿಸ್ಥಿತಿಯಲ್ಲಿದ್ದಾರೆ.

Comments are closed.