ಮಂಡ್ಯ: ನಾನು ನಿಮಗೆ ನೀರು ಬಿಡಿಸಿದ್ರೆ ಓಟ್ ಹಾಕಿಸಿಕೊಳ್ಳಲು ನೀರು ಬಿಡಿಸಿದ್ದಾರೆ ಎಂದು ಸ್ವಾಭಿಮಾನ ಉಳಿಸಿಕೊಳ್ಳಲು ಬಂದೆ ಅಂದರಲ್ಲ ಅವರು ಹೇಳುತ್ತಾರೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಸುಮಲತಾ ವಿರುದ್ಧ ಪರೋಕ್ಷವಾಗಿ ವ್ಯಂಗ್ಯ ಮಾಡಿದ್ದಾರೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಶನಿವಾರ ಮಾತನಾಡಿದ ಅವರು, ನನ್ನ ವಿರುದ್ಧ ದೂರು ಕೊಡುತ್ತಾರೆ ಸ್ವಾಭಿಮಾನ ಉಳಿಸಿದರಲ್ಲ ಅವರು(ಸುಮಲತಾ). ಮತ್ತೆ ನಾನು ಮಾಧ್ಯಮದವರಿಗೆ ಆಹಾರ ಆಗಲ್ಲ, ನಾನು ಲೋಕಸಭೆ ಚುನಾವಣೆಗೆ ನಿಲ್ಲಬೇಡಿ ಎಂದು ನಿಖಿಲ್ಗೆ ನಾನೇ ಹೇಳಿದ್ದೆ ಎಂದು ಅವರು ತಿಳಿಸಿದರು.
ಇನ್ನು ನನಗೆ ದೇವರು ಕೊಟ್ಟ ಅಧಿಕಾರ ದೇವರು ಕಿತ್ತುಕೊಂಡ, ಯಡಿಯೂರಪ್ಪ ಕಿತ್ತುಕೊಂಡ್ರಾ(?) ಯಡಿಯೂರಪ್ಪ ಒಕ್ಕಲಿಗ ಅಧಿಕಾರಿಗಳನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಒಕ್ಕಲಿಗ ಅಧಿಕಾರಿಗಳನ್ನು ಯಾವ ರೀತಿ ಚೆಂಡಾಡುತ್ತಿದ್ದೀರಿ ಅಂತಾ ಗೊತ್ತು. ರವಿಕಾಂತೇಗೌಡ ನಿಮಗೆ ಏನು ಮಾಡಿದ್ದ. ಕುಮಾರಸ್ವಾಮಿ ಅಭಿಮಾನಿ ಎಂದು ಆರೀತಿ ಮಾಡುತ್ತಿದ್ದೀರಿ ಎಂದು ಬಹಿರಂಗ ವೇದಿಕೆಯಲ್ಲಿ ಹೆಚ್.ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಗಂಭೀರ ಆರೋಪ ಮಾಡಿದರು.
ಸದ್ಯ ಚುನಾವಣೆಯಲ್ಲಿ ನಿಖಿಲ್ ಸ್ಪರ್ಧೆ ಇಲ್ಲ. ಕೆ.ಆರ್ ಪೇಟೆಯವರನ್ನೇ ಒಮ್ಮತದ ಅಭ್ಯರ್ಥಿಯಾಗಿ ಆಯ್ಕೆ ಮಾಡಿತ್ತೇವೆ. ನನ್ನ ಮಗನಿಗೆ ವಿಷ ಹಾಕಿದ ರೀತಿ ಮತ್ತೆ ಇನ್ನೊಬ್ಬ ಅಭ್ಯರ್ಥಿಗೆ ವಿಷ ಹಾಕಬೇಡಿ. ನಾನು ರಾಜಕೀಯ ಮಾಡಿದ್ದು ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಲು, ಹಣ ಮಾಡಿ ಯಡಿಯೂರಪ್ಪನ ರೀತಿ ಜೈಲಿಗೆ ಹೋಗಲು ಅಲ್ಲ ಎಂದು ಎಂದು ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಹೆಚ್.ಡಿ ಕುಮಾರಸ್ವಾಮಿ ಅವರು ನುಡಿದರು.
Comments are closed.