ಕರ್ನಾಟಕ

ಹಜ್ ಯಾತ್ರೆಗೆ ಹೊರಟಿದ್ದ ವೇಳೆ ಭೀಕರ ರಸ್ತೆ ಅಪಘಾತ: ಧಾರವಾಡದ ಒಂದೇ ಕುಟುಂಬದ 7 ಮಂದಿ ಸಾವು!

Pinterest LinkedIn Tumblr

ಧಾರವಾಡ: ಮಹಾರಾಷ್ಟ್ರದ ಸತಾರಾ ಬಳಿ ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ದಂಪತಿ ಸೇರಿ ಧಾರವಾಡ ಮೂಲ‌ದ ಒಂದೇ ಕುಟುಂಬದ ಏರು ಜನ ಮೃತಪಟ್ಟಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಧಾರವಾಡ ನಿಜಾಮುದ್ದೀನ್ ಕಾಲನಿಯ ನಿಜಾಮುದ್ದೀನ‌ ಸೌದಾಗರ ಎಂಬುವವರ ಕುಟುಂಬಕ್ಕೆ ಸೇರಿದ ಇಬ್ಬರು ಮಕ್ಕಳು ಸೇರಿದಂತೆ ಆರು ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ನಿನ್ನೆ ರಾತ್ರಿ ಧಾರವಾಡದಿಂದ ರಾತ್ರಿ 8ಕ್ಕೆ ಮುಂಬೈಗೆ ಹೊರಟಿದ್ದ ದಂಪತಿ ಮುಂಬೈ ಮೂಲಕ ಆಗಸ್ಟ್ 1ಕ್ಕೆ ವಿಮಾನದ ಮೂಲಕ ಹಜ್ ಹೊರಟಿದ್ದರು. ನಿಜಾಮುದ್ದೀನ್ ಸೌದಾಗರ(65), ಪತ್ನಿ ಸಪೂರಾಬೇಗಂ(58), ಪುತ್ರ ಮಸ್ತಫ ಸೌದಾಗರ(45), ಸೊಸೆ ನಫಿಸಾ(35), ಮೊಮ್ಮಕ್ಕಳಾದ ಗುಲ್ನಾರ(6), ತೈಬಾ(4) ಮತ್ತು ಅಹ್ಮದರಜಾ(2) ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು ಗಂಭೀರವಾಗಿ ಗಾಯಗೊಂಡಿರುವ ಚಾಲಕನ ಸ್ಥೀತಿ ಚಿಂತಾಜನಕವಾಗಿದೆ. ಬೋರೇಗಾಂವ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇನ್ನು ನಿನ್ನೆಯಷ್ಟೇ ಕುಟುಂಬದ ಸದಸ್ಯರು, ಸ್ನೇಹಿತರು, ಹಿತೈಷಿಗಳೆಲ್ಲ ಇವರನ್ನು ಹಜ್ ಯಾತ್ರೆಗೆ ಬಿಳ್ಕೋಟ್ಟಿದ್ದರು. ಆದ್ರೆ ರಾತ್ರಿ ಕಳೆದು ಬೆಳಗಾಗುತ್ತಿದ್ದಂತೆಯೇ ಒಂದೇ ಕುಟುಂಬದ ಎಲ್ಲರೂ ಮೃತಪಟ್ಟಿದ್ದು, ಇಡೀ ಮದಿಹಾಳ ಬಡಾವಣೆಯಲ್ಲಿ ನೀರವ ಮೌನ ಆವರಿಸಿದೆ.

Comments are closed.