ಕರ್ನಾಟಕ

ಸಿದ್ಧಾರ್ಥ ಕುಟುಂಬಕ್ಕೆ ಜಲಕಂಟಕದ ಮುನ್ಸೂಚನೆ ನೀಡಿದ್ದ ಗುರೂಜಿ?!

Pinterest LinkedIn Tumblr


ಕೋಟಿ ಕೋಟಿ ಆಸ್ತಿ ಒಡೆಯ , ಕಾಫಿ ಡೇ ಮಾಲೀಕ ವಿ.ಜಿ.ಸಿದ್ದಾರ್ಥ ನಾಪತ್ತೆ ಪ್ರಕರಣಕ್ಕೆ ಹೊಸತೊಂದು ಟ್ವಿಸ್ಟ್​ ಸಿಕ್ಕಿದೆ. ಹೌದು ಸಿದ್ದಾರ್ಥ ಇತ್ತೀಚಿನ ದಿನಗಳಲ್ಲಿ ಸಮಸ್ಯೆಯೊಂದರಲ್ಲಿ ಸಿಲುಕಿಕೊಂಡಿದ್ದರು ಎನ್ನಲಾಗಿದ್ದು, ಈ ವಿಚಾರವನ್ನು ಗುರೂಜಿಯೊಬ್ಬರು ಎಸ್​ಎಂಕೆ ಕುಟುಂಬಕ್ಕೆ ಮೊದಲೇ ತಿಳಿಸಿದ್ದರು.

ಹೌದು ಸಿದ್ದಾರ್ಥ ಯಾವುದೋ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದರು ಎಂಬುದು ಎಸ್​ಎಂಕೆ ಕುಟುಂಬಕ್ಕೆ ಗೊತ್ತಿತ್ತು. ಹೀಗಾಗಿ ಸಿದ್ದಾರ್ಥ ಕುಟುಂಬ ಅಂದ್ರೆ ಸಿದ್ದಾರ್ಥ ಅತ್ತೆ ಎಸ್​ಎಂಕೆ ಪತ್ನಿ ಪ್ರೇಮಾ ಹಾಗೂ ಸಿದ್ದಾರ್ಥ ಪುತ್ರ ಅಮೃರ್ಥ್ಯ ಆಧ್ಯಾತ್ಮಿಕ ಚಿಂತಕ ಹಾಗೂ ಅವಧೂತ ವಿನಯ್ ಗುರೂಜಿಯವರನ್ನು ಭೇಟಿ ಮಾಡಿದ್ದರಂತೆ.

ಈ ವೇಳೆ ವಿನಯ್ ಗುರೂಜಿ, ನಿಮ್ಮ ತಂದೆ ಯಾವುದೋ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದಾರೆ. ಹೀಗಾಗಿ ಅವರನ್ನು ಹುಶಾರಾಗಿ ನೋಡಿಕೋ ಎಂದು ಗುರೂಜಿ, ಅವರ ಪುತ್ರ ಅಮರ್ಥ್ಯರಿಗೆ ಹೇಳಿದ್ದರು ಎನ್ನಲಾಗಿದೆ. ಇದೀಗ ಸಿದ್ದಾರ್ಥ ನಾಪತ್ತೆಯಾದ ಬಳಿಕ ಮತ್ತೆ ಎಸ್​ಎಂಕೆ ಪತ್ನಿ ಪ್ರೇಮಾ ಮತ್ತೊಮ್ಮೆ ಗುರೂಜಿಗೆ ಕರೆ ಮಾಡಿದ್ದು, ಈ ವೇಳೆ ನನಗೆ ನೀರಷ್ಟೇ ಕಾಣ್ತಿದೆ ಎಂದು ಗುರೂಜಿ ಜಲಕಂಟಕದ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

ಒಟ್ಟಿನಲ್ಲಿ ಸಿದ್ದಾರ್ಥ ನಾಪತ್ತೆ ಪ್ರಕರಣ ಕುತೂಹಲ ಮೂಡಿಸುತ್ತಿದ್ದು, ನಿಜವಾಗಿಯೂ ಸಿದ್ದಾರ್ಥ ಆತ್ಮಹತ್ಯೆಗೆ ಶರಣಾಗಿದ್ದಾರಾ? ಅಥವಾ ಅವರನ್ನು ಯಾರನ್ನಾದರೂ ಅಪಹರಿಸಿದ್ದಾರಾ? ಎಂಬ ಅನುಮಾನಗಳು ಸೃಷ್ಟಿಯಾಗಿವೆ.

Comments are closed.