ಕರ್ನಾಟಕ

ಅನರ್ಹತೆಯ ನಂತರ ಬಿಸಿ ಪಾಟೀಲ್​ ಪ್ರತಿಕ್ರಿಯೆ

Pinterest LinkedIn Tumblr


ಹಾವೇರಿ: ಶಾಸಕ ಸ್ಥಾನದಿಂದ ಅನರ್ಹತೆಗೊಂಡ ಬೆನ್ನಲ್ಲೆ, ಮತ್ತೆ ಚುನಾವಣೆ ಎದುರಿಸೋಣ ಸ್ಪೀಕರ್ ಕೊಟ್ಟ ತೀರ್ಪು ನ್ಯಾಯ ಸಮ್ಮತವಾಗಿಲ್ಲ ಎಂದು ರೆಬೆಲ್​ ಕಾಂಗ್ರೆಸ್​ ಶಾಸಕ ಬಿ.ಸಿ ಪಾಟೀಲ್ ಅವರು ಭಾನುವಾರ ವಾಟ್ಸಾಪ್​ನಲ್ಲಿ ಹೇಳಿದ್ದಾರೆ.

ಕೌರವ ವಾಟ್ಸಪ್ ಗ್ರೂಪ್ ಮೂಲಕ ಈ ವಿಷಯದ ಬಗ್ಗೆ ತಿಳಿಸಿದ್ದು, ಈ ತೀರ್ಪಿನ ಬಗ್ಗೆ ಯಾರು ತಲೆ ಕೆಡಸಿಕೊಳ್ಳುವ ಅವಶ್ಯಕತೆ ಇಲ್ಲ, ಇದಕ್ಕೆ ಯಾರು ಧೃತಿಗೆಡಬೇಡಿ, ಮತ್ತೊಮ್ಮೆ ಚುನಾವಣೆ ಎದುರಿಸಲು ಸಿದ್ಧರಾಗೊಣ ಎಂದು ಅವರು ಅನರ್ಹಗೊಂಡ ಹಿರೇಕೆರೂರು ಶಾಸಕ ಮನವಿ ಮಾಡಿದ್ದಾರೆ.

ಇನ್ನು ಕ್ಷೇತ್ರದ ಜನತೆಗೆ ಮನವಿ ಮಾಡಿಕೊಂಡ ಶಾಸಕ ಬಿ.ಸಿ ಪಾಟೀಲ್, ಸ್ಪೀಕರ್ ಕೊಟ್ಟ ತೀರ್ಪನ್ನ ಪ್ರಶ್ನಿಸಿ ನಾನು ಸುಪ್ರೀಂ ಕೋರ್ಟ್​ ಮೋರೆ ಹೋಗುತ್ತೇನೆ. ಕೋರ್ಟ್ ತೀರ್ಪು ನ್ಯಾಯ ಪರವಾಗಿರುತ್ತೆ ಎಂದು ರೆಬೆಲ್​ ಕಾಂಗ್ರೆಸ್​ ಬಿ.ಸಿ ಪಾಟೀಲ್ ಪೋಸ್ಟ್​ನಲ್ಲಿ ಈ ಸಂದೇಶ ಹರಿಬಿಟ್ಟಿದ್ದಾರೆ.

Comments are closed.