ಕರ್ನಾಟಕ

ಕಾಂಗ್ರೆಸ್​ಗೆ ಆಘಾತ- ಅಚ್ಚರಿ ಹೇಳಿಕೆ ನೀಡಿದ ಕಾಂಗ್ರೆಸ್ ಶಾಸಕ ಟಿ.ಡಿ ರಾಜೇಗೌಡ

Pinterest LinkedIn Tumblr


ಚಿಕ್ಕಮಗಳೂರು: ಮುಖ್ಯಮಂತ್ರಿ ಯಡಿಯ್ಯೂರಪ್ಪ ಸದನದಲ್ಲಿ ಯಶಸ್ವಿಯಾಗಿ ಬಹುಮತ ಸಾಬೀತು ಮಾಡುತ್ತಾರೆ. ವಿಶ್ವಾಸಮತ ಯಾಚನೆಯಲ್ಲಿ ಯಶಸ್ಸು ಗಳಿಸುತ್ತಾರೆ ಎಂದು ಶೃಂಗೇರಿ ಕಾಂಗ್ರೆಸ್ ಶಾಸಕ ಟಿ. ಡಿ ರಾಜೇಗೌಡ ಅಚ್ಚರಿ ಹೇಳಿಕೆ ನೀಡಿದ್ದಾರೆ.

ಯಶಸ್ವಿಯಾಗಿ ಬಹುಮತ ಸಾಬೀತು

ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅತೀ ಹೆಚ್ಚು ಮತಗಳನ್ನು ಯಡಿಯೂರಪ್ಪ ಖಂಡಿತವಾಗಿ ಗಳಿಸುತ್ತಾರೆ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದು ಟಿ. ಡಿ ರಾಜೇಗೌಡ ಹೇಳಿದರು.

ಗೆದ್ದವರು ಕೊನೆಯ ತನಕ ಅದೇ ಪಕ್ಷದಲ್ಲಿ ಇರಬೇಕು

ಅತೃಪ್ತ ಶಾಸಕರು ಅನರ್ಹತೆ ಕುರಿತು ಸ್ಪೀಕರ್ ರಮೇಶ್ ಕುಮಾರ್ ನಿರ್ಧಾರ ಸ್ವಾಗತಾರ್ಹ , ಸೂಕ್ತ ನಿರ್ಧಾರವನ್ನು ಸ್ಪೀಕರ್ ತೆಗೆದುಕೊಂಡಿದ್ದಾರೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸ್ವೀಕರ್ ನಿಲುವು ಸರಿಯಾಗಿದೆ, ಒಂದು ಚಿನ್ನೆಯಲ್ಲಿ ಗೆದ್ದವರು ಕೊನೆಯ ತನಕ ಅದೇ ಪಕ್ಷದಲ್ಲಿ ಇರಬೇಕು. ಅದನ್ನು ಬಿಟ್ಟು ರಾಜೀನಾಮೆ ನೀಡಿರುವರಿಗೆ ಸರಿಯಾದ ಶಿಕ್ಷೆ ಆಗಿದೆ ಎಂದು ಶಾಸಕ ಟಿ.ಡಿ ರಾಜೇಗೌಡ ಅಭಿಪ್ರಾಯಪಟ್ಟರು.

Comments are closed.