ಕರ್ನಾಟಕ

ಮುಂಬೈ ಸೇರಿರುವ ಶಾಸಕರಲ್ಲಿನಾಲ್ವರು ಅತೃಪ್ತ ಶಾಸಕರಿಗೆ ಸ್ಪೀಕರ್​ ನೋಟಿಸ್​: ಖುದ್ದು ವಿಚಾರಣೆಗೆ ಹಾಜರಾಗಲು ಸೂಚನೆ

Pinterest LinkedIn Tumblr

ಬೆಂಗಳೂರು: ರಾಜೀನಾಮೆ ಕೊಟ್ಟು ಮುಂಬೈ ಸೇರಿರುವ ಶಾಸಕರಲ್ಲಿ ನಾಲ್ವರಿಗೆ ಸ್ಪೀಕರ್​ ರಮೇಶ್​ ಕುಮಾರ್​ ಅವರು ಅನರ್ಹತೆಗೆ ಸಂಬಂಧಪಟ್ಟಂತೆ ನೋಟಿಸ್​ ನೀಡಿದ್ದಾರೆ.

ಬಂಡಾಯ ಶಾಸಕರನ್ನು ಅನರ್ಹಗೊಳಿಸುವಂತೆ ಕಾಂಗ್ರೆಸ್​ ನಾಯಕರು ನೀಡಿರುವ ದೂರಿನ ಅನ್ವಯ ಶಾಸಕರಾದ ಮುನಿರತ್ನ, ಬಿ.ಸಿ.ಪಾಟೀಲ್​, ಮಹೇಶ್ ಕುಮಟಳ್ಳಿ ಹಾಗೂ ರಮೇಶ್​ ಜಾರಕಿಹೊಳಿ ಅವರಿಗೆ ಶೋಕಾಸ್​ ನೋಟಿಸ್​ ನೀಡಿದ್ದಾರೆ. ರಾಜೀನಾಮೆ ನೀಡಿದ್ದಕ್ಕೆ ವಿವರಣೆ ಕೊಟ್ಟಿಲ್ಲ. ನಿಮ್ಮನ್ನು ಯಾಕೆ ಅನರ್ಹಗೊಳಿಸಬಾರದು ಎಂಬುದಕ್ಕೆ ಸ್ಪಷ್ಟನೆ ನೀಡಿ. ನಾಳೆ (ಮಂಗಳವಾರ) ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಬನ್ನಿ ಎಂದು ನೋಟಿಸ್​ನಲ್ಲಿ ತಿಳಿಸಿದ್ದಾರೆ.

ರಾಜೀನಾಮೆ ನೀಡಿರುವ ನಿಮ್ಮನ್ನು ನಿಯಮ ಏಳರ ಅಡಿಯಲ್ಲಿ ಯಾಕೆ ಅನರ್ಹಗೊಳಿಸಬಾರದು ಎಂಬುದಕ್ಕೆ ಖುದ್ದಾಗಿ ಹಾಜರಾಗಿ ವಿವರಣೆ ನೀಡಿ ಎಂದು ನೋಟಿಸ್​ನಲ್ಲಿ ಸ್ಪೀಕರ್​ ತಿಳಿಸಿದ್ದಾರೆ.

Comments are closed.