ಕರ್ನಾಟಕ

ರಾಜ್ಯ ಸಮ್ಮಿಶ್ರ ಸರ್ಕಾರ ಉರುಳಿಸಲು ಬಿಜೆಪಿ ಹೈ ಕಮಾಂಡ್ ಗ್ರೀನ್ ಸಿಗ್ನಲ್ ?

Pinterest LinkedIn Tumblr


ಕೋಲಾರ: ರಾಜ್ಯ ಮೈತ್ರಿ ಸರ್ಕಾರ ಉರುಳಿಸಲು ಬಿಜೆಪಿ ವರಿಷ್ಠರಿಗೆ, ಬಿಜೆಪಿ ಹೈ ಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ. ಈ ವಿಚಾರ ನನಗೆ ದೆಹಲಿಯಲ್ಲಿರುವ ಬಿಜೆಪಿಯವರಿಂದಲೇ ಗೊತ್ತಾಗಿದೆ ಎಂದು ಸಚಿವ ಕೃಷ್ಣಭೈರೇಗೌಡ ಹೊಸ ಬಾಂಬ್ ಸಿಡಿಸಿದ್ದಾರೆ.

ಕೋಲಾರದಲ್ಲಿ ಈ ಬಗ್ಗೆ ಮಾತನಾಡಿದ ಕೃಷ್ಣಭೈರೇಗೌಡ, ದೆಹಲಿ ಬಿಜೆಪಿ ನಾಯಕರು ಸರ್ಕಾರ ಉರುಳಿಸೋಕೆ ಸೂಚನೆಯೂ ಕೊಟ್ಟಿದ್ದಾರೆ. ಈ ವಿಚಾರ ಬಿಜೆಪಿ ದೆಹಲಿ ಮೂಲದಿಂದಲೇ ನನಗೆ ಗೊತ್ತಾಗಿದೆ ಎಂದಿದ್ದಾರೆ.

ಏನೇ ಮಾಡಿ ಮೈತ್ರಿ ಸರ್ಕಾರವನ್ನ ಉರುಳಿಸಬೇಕು ಅನ್ನೋ ನಿರ್ಧಾರಕ್ಕೆ ಬಿಜೆಪಿಯವ್ರು ಬಂದಿದ್ದಾರೆ. ಸರ್ಕಾರವನ್ನ ಉರುಳಿಸಲ್ಲ ಎಂದು ಜನರನ್ನ ದಿಕ್ಕು ತಪ್ಪಿಸಲು ಗೊಂದಲದ ಹೇಳಿಕೆ ಕೊಡ್ತಿದ್ದಾರೆ. 10 ತಿಂಗಳಿಂದ ಸರ್ಕಾರ ಉರುಳಿಸೊ ಪ್ರಯತ್ನ ಮಾಡ್ತಿದ್ದಾರೆ, ಮುಂದೆಯೂ ಮಾಡ್ತಾನೆ ಇರ್ತಾರೆ. ಸದ್ಯಕ್ಕೆ ಮೈತ್ರಿ ಸರ್ಕಾರ ಸುಭದ್ರವಾಗಿದೆ ಎಂದು ಕೃಷ್ಣಭೈರೇಗೌಡ ಸ್ಪಷ್ಟನೆ ನೀಡಿದ್ದಾರೆ.

Comments are closed.