ಕರ್ನಾಟಕ

ಹೆಚ್.ವಿಶ್ವನಾಥ್‌ಗೆ ಪರೋಕ್ಷ ಟಾಂಗ್ ಕೊಟ್ಟ ಸಾ.ರಾ.ಮಹೇಶ್..!

Pinterest LinkedIn Tumblr


ಕೊಡಗು: ಹೆಚ್.ವಿಶ್ವನಾಥ್ ಮಾತನಾಡಿದ್ದರ ಬಗ್ಗೆ ಸಾ.ರಾ.ಮಹೇಶ್ ಪ್ರತಿಕ್ರಿಯೆ ನೀಡಿದ್ದು, ಅವರು 40 ವರ್ಷದಿಂದ ರಾಜಕಾರಣದಲ್ಲಿದ್ದಾರೆ. ನನಗೆ 20 ವರ್ಷದ ರಾಜಕೀಯ ಅನುಭವ ಇದೆ ಅಷ್ಟೇ. ನಮ್ಮಂಥವರಿಗೆ ಸಲಹೆ ಕೊಡುವ ಸಂಪೂರ್ಣ ಹಕ್ಕು ಅವರಿಗಿದೆ. ಅವರ ಸಲಹೆ, ಸೂಚನೆಯಲ್ಲಿ ಸತ್ಯಾಂಶವಿದ್ರೆ ಅದನ್ನು ಸರಿಪಡಿಸಿಕೊಳ್ತೀನಿ ಎಂದು ಹೇಳಿದ್ದಾರೆ.

ನನನ್ನು ಕೆ.ಆರ್.ನಗರದ ಜನ 1,840 ಓಟಲ್ಲಿ ಮೂರನೇ ಬಾರಿ ಗೆಲ್ಲಿಸಿದ್ದಾರೆ. ನಾನು ಯಾವುದನ್ನೂ ಮರೆತಿಲ್ಲ, ಹಾಗಾಗಿ ಸೀಗೋಡಿನಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದೆ . ಇಂದು ಮಡಿಕೇರಿಗೆ ಭೇಟಿ ನೀಡಿ ಮನೆ ನಿರ್ಮಾಣ ಕಾರ್ಯ ವೀಕ್ಷಣೆ ಮಾಡ್ತಿದೀನಿ ಎನ್ನುವ ಮೂಲಕ ಹೆಚ್.ವಿಶ್ವನಾಥ್‌ಗೆ ಸಾ.ರಾ.ಮಹೇಶ್ ಪರೋಕ್ಷ ಟಾಂಗ್ ನೀಡಿದ್ದಾರೆ.

ಈ ಬಾರಿಯ ಪುರಸಭೆ ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ . 2018ರ ಚುನಾವಣೆಯಲ್ಲಿ ಕೆ.ಆರ್.ನಗರ ಟೌನ್‌ನಲ್ಲಿ 2000 ಓಟು ಡಿಫರೆನ್ಸ್ ಇತ್ತು. ಈ ಬಾರಿಯ ಎಲೆಕ್ಷನ್ನಲ್ಲಿ 516 ಓಟು ಮಾತ್ರ ಡಿಫರೆನ್ಸ್ ಇದೆ. ಅದನ್ನ ಹೇಗೆ ಸರಿ ಮಾಡ್ಕೊಬೇಕು ಅನ್ನೋದನ್ನ ವಿಶ್ವನಾಥ್ ಅವರ ಸಲಹೆ ಸ್ವೀಕರಿಸಿ ಸರಿ ಮಾಡ್ಕೊತೀನಿ ಎಂದಿದ್ದಾರೆ.

ಇನ್ನು ಮಾತು ಮುಂದುವರೆಸಿದ ಸಾ.ರಾ.ಮಹೇಶ್, ನಾನು ಯಾವತ್ತೂ ದ್ವೇಷದ ರಾಜಕಾರಣ ಮಾಡಿಲ್ಲ, ಮಾಡೋದು ಇಲ್ಲ. ಜೆಡಿಎಸ್ ಪಕ್ಷ ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ಕಾಣೋ ಪಕ್ಷ . ವಿಶ್ವನಾಥ್ ಅವರೇ ನಮ್ಮ ರಾಜ್ಯಾಧ್ಯಕ್ಷರು, ಅವರನ್ನೇ ಒಪ್ಪಿಕೊಂಡ ಮೇಲೆ , ಅವರ ಸಲಹೆ ಒಪ್ಪಿಕೊಳ್ಳೋದ್ರಲ್ಲೇನಿದೆ ಎಂದಿದ್ದಾರೆ.

Comments are closed.