ಹಾಸನದಲ್ಲಿ ಗೆಲವು ಸಾಧಿಸಿದ ಪ್ರಜ್ವಲ್ ರೇವಣ್ಣಗೆ ಜೆಡಿಎಸ್ ಪಕ್ಷದಲ್ಲಿ ದೊಡ್ಡ ಹುದ್ದೆ ನೀಡಲು ಮಾಜಿ ಪ್ರಧಾನಿ ದೇವೇಗೌಡರು ಮುಂದಗಿದ್ದಾರೆ.
ನೂತನ ಸಂಸದ ಪ್ರಜ್ವಲ್ ಗೆ ಹೊಸ ಜವಾಬ್ದಾರಿ ನೀಡಲಿದ್ದು, ಪ್ರಜ್ವಲ್ ಹಿಂದಿನಿಂದಲೂ ಸಂಘಟನೆಯಲ್ಲಿ ತೊಡಗಿಕೊಂಡಿದ್ದು, ಪಕ್ಷ ಸಂಘಟನೆ, ಜನರ ನಡುವೆ ಬೆರೆಯುವಿಕೆ, ಕಾರ್ಯಕರ್ತರ ಜೊತೆಗಿನ ಒಡನಾಟ ಗುರುತಿಸಿರುವ ದೇವೇಗೌಡರು ಈ ತೀರ್ಮಾನ ಕೈಗೊಂಡಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷರಾಗಿ ಎಚ್ ವಿಶ್ವನಾಥ್ ಇದ್ದಾರೆ, ಸದ್ಯ ಯುವ ಘಟಕದ ಅಧ್ಯಕ್ಷರಾಗಿ ಮಧು ಬಂಗಾರಪ್ಪ ಇದ್ದಾರೆ. ವಿಶ್ವನಾಥ್ ಕುರುಬ ಜಾತಿ ಪ್ರತಿನಿಧಿ, ಮಧು ಬಂಗಾರಪ್ಪ ಈಡಿಗ ಜಾತಿಗೆ ಸೇರಿದವರು. ಒಕ್ಕಲಿಗ ಜಾತಿಯಿಂದ ಆಯಕಟ್ಟಿನ ಸ್ಥಳದಲ್ಲಿ ಒಬ್ಬರಾದರೂ ಇರಲಿ ಎಂದು ಈ ಯೋಚನೆ ಮಾಡಿದ್ದಾರೆ.
ಪ್ರಜ್ವಲ್ ಜೆಡಿಎಸ್ ನ ಭವಿಷ್ಯದ ನಾಯಕ ಎಂದೇ ಬಿಂಬಿತನಾದ ಯುವ ನಾಯಕ. ಹಾಗಾಗಿ ಈಗಿನಿಂದಲೇ ಪ್ರಜ್ವಲ್ ಪಕ್ಷವನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಮತ್ತು ಯುವಕರನ್ನು ಸಂಘಟನೆ ಮಾಡಲು ಸೂಕ್ತ ಎಂಬ ಭಾವನೆಯೊಂದಿಗೆ ಕೆಲವೊಂದು ಜವಾಬ್ದಾರಿ ನೀಡಲು ಪ್ರಜ್ವಲ್ ಗೆ ಪಕ್ಷ ಮುಂದಾಗಿದೆ.
Comments are closed.