ಕರ್ನಾಟಕ

ಹಾಸನದಲ್ಲಿ ಜಯಗಳಿಸಿದ ಪ್ರಜ್ವಲ್ ರೇವಣ್ಣಗೆ ದೊಡ್ಡ ಉಡುಗೊರೆ!

Pinterest LinkedIn Tumblr


ಹಾಸನದಲ್ಲಿ ಗೆಲವು ಸಾಧಿಸಿದ ಪ್ರಜ್ವಲ್ ರೇವಣ್ಣಗೆ ಜೆಡಿಎಸ್​ ಪಕ್ಷದಲ್ಲಿ ದೊಡ್ಡ ಹುದ್ದೆ ನೀಡಲು ಮಾಜಿ ಪ್ರಧಾನಿ ದೇವೇಗೌಡರು ಮುಂದಗಿದ್ದಾರೆ.

ನೂತನ ಸಂಸದ ಪ್ರಜ್ವಲ್ ಗೆ ಹೊಸ ಜವಾಬ್ದಾರಿ ನೀಡಲಿದ್ದು, ಪ್ರಜ್ವಲ್ ಹಿಂದಿನಿಂದಲೂ ಸಂಘಟನೆಯಲ್ಲಿ ತೊಡಗಿಕೊಂಡಿದ್ದು, ಪಕ್ಷ ಸಂಘಟನೆ, ಜನರ ನಡುವೆ ಬೆರೆಯುವಿಕೆ, ಕಾರ್ಯಕರ್ತರ ಜೊತೆಗಿನ ಒಡನಾಟ ಗುರುತಿಸಿರುವ ದೇವೇಗೌಡರು ಈ ತೀರ್ಮಾನ ಕೈಗೊಂಡಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷರಾಗಿ ಎಚ್ ವಿಶ್ವನಾಥ್ ಇದ್ದಾರೆ, ಸದ್ಯ ಯುವ ಘಟಕದ ಅಧ್ಯಕ್ಷರಾಗಿ ಮಧು ಬಂಗಾರಪ್ಪ ಇದ್ದಾರೆ. ವಿಶ್ವನಾಥ್ ಕುರುಬ ಜಾತಿ ಪ್ರತಿನಿಧಿ, ಮಧು ಬಂಗಾರಪ್ಪ ಈಡಿಗ ಜಾತಿಗೆ ಸೇರಿದವರು. ಒಕ್ಕಲಿಗ ಜಾತಿಯಿಂದ ಆಯಕಟ್ಟಿನ ಸ್ಥಳದಲ್ಲಿ ಒಬ್ಬರಾದರೂ ಇರಲಿ ಎಂದು ಈ ಯೋಚನೆ ಮಾಡಿದ್ದಾರೆ.

ಪ್ರಜ್ವಲ್ ಜೆಡಿಎಸ್ ನ ಭವಿಷ್ಯದ ನಾಯಕ ಎಂದೇ ಬಿಂಬಿತನಾದ ಯುವ ನಾಯಕ. ಹಾಗಾಗಿ ಈಗಿನಿಂದಲೇ ಪ್ರಜ್ವಲ್ ಪಕ್ಷವನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಮತ್ತು ಯುವಕರನ್ನು ಸಂಘಟನೆ ಮಾಡಲು ಸೂಕ್ತ ಎಂಬ ಭಾವನೆಯೊಂದಿಗೆ ಕೆಲವೊಂದು ಜವಾಬ್ದಾರಿ ನೀಡಲು ಪ್ರಜ್ವಲ್ ಗೆ ಪಕ್ಷ ಮುಂದಾಗಿದೆ.

Comments are closed.