ಕರ್ನಾಟಕ

ತನ್ನ ಶಾಲೆಗೆ ಮಕ್ಕಳು ಬರುತ್ತಿಲ್ಲವೆಂದು ಮುಖ್ಯಸ್ಥ ಮಾಡಿದ್ದು ಏನು ಗೊತ್ತಾ?

Pinterest LinkedIn Tumblr


ಬೆೆಂಗಳೂರು: ಬೆಂಗಳೂರು ಹೊರವಲಯದ ಹೆಸರಘಟ್ಟ ಬಳಿ ಮೇ.16ರಂದು ಉದ್ಯಮಿ ಮೇಲೆ ಲಾಂಗ್ ಮಚ್ಚುಗಳಿಂದ ನಡೆದ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಒಂದು ಶಾಲೆಯ ಮುಖ್ಯಸ್ಥ, ಮತ್ತೊಂದು ಶಾಲೆಯ ಮುಖ್ಯಸ್ಥನ ಹತ್ಯೆಗೆ ಸುಪಾರಿ ನೀಡಿದ್ದರೆಂದು ತಿಳಿದು ಬಂದಿದೆ.

ಆರ್ ಸಿ ಇಂಟರ್ ನ್ಯಾಶನಲ್ ಶಾಲೆಯ ರಾಮಚಂದ್ರ ರೆಡ್ಡಿ, ಮತ್ತೊಂದು ಶಾಲೆಯ ಮುಖ್ಯಸ್ಥ ನಾಗೇಶ್ವರರಾವ್ ಹತ್ಯೆಗೆ ಸ್ಕೆಚ್ ಹಾಕಿದ್ದು, ಮೋಹನ್ ಎಂಬಾತನ ಜೊತೆ ಸೇರಿ, 15 ಲಕ್ಷಕ್ಕೆ ಸುಪಾರಿ ನೀಡಲಾಗಿತ್ತು.

ಶ್ರೀನಿವಾಸ್ ಮೂರ್ತಿ, ವೆಂಕಟೇಶ್, ಯೋಗೇಶ್, ನಾಗೇಶ್, ಆದರ್ಶ, ವೀರಭದ್ರ ಎಂಬ ಸುಪಾರಿ ಕೊಲೆಗಾರರನ್ನ ಪೊಲೀಸರು ಬಂಧಿಸಿದ್ದು, ಬೆಂಗಳೂರಿನ ಸುತ್ತಮುತ್ತ ತಲೆಮರೆಸಿಕೊಂಡಿರುವ ರಾಮಚಂದ್ರಾ ರೆಡ್ಡಿ ಮತ್ತು ಮೋಹನ್‌ಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ.

Comments are closed.