ಕರ್ನಾಟಕ

ರಮೇಶ್​ ಜಾರಕಿಹೊಳಿ ಕಟ್ಟಿಹಾಕಲು ಕಾಂಗ್ರೆಸ್ ನಾಯಕರಿಂದ ಚಕ್ರವ್ಯೂಹ ಸಿದ್ಧ..!

Pinterest LinkedIn Tumblr


ದಕ್ಷಿಣ ಭಾರತದಲ್ಲಿ ಕಾಂಗ್ರೆಸ್​ ಪಾಲಿಗೆ ಕರ್ನಾಟಕವೇ ಭದ್ರಕೋಟೆ. ಇಲ್ಲಿಯೂ ಅಧಿಕಾರ ಕೈ ತಪ್ಪಿದರೆ ಕೈ ಪಡೆ ಕಂಗಾಲಾಗೋದ್ರಲ್ಲಿ ನೋ ಡೌಟ್​ ಹೀಗಾಗಿಯೇ ಹೇಗಾದರು ಮಾಡಿ ಮೈತ್ರಿ ಸರ್ಕಾರ ಉಳಿಸಿಕೊಳ್ಳಲೇ ಬೇಕು ಅಂತಾ ಕೇಂದ್ರ ನಾಯಕರು ರಾಜ್ಯದ ಮೇಲೆ ಕಣ್ಣಿಟ್ಟಿದ್ದಾರೆ.

ರಾಜ್ಯ ಉಸ್ತುವಾರಿ ವೇಣುಗೋಪಾಲ್​ಗೆ ಸೂಚನೆ ನೀಡಿರೋ ರಾಹುಲ್​ ಗಾಂಧಿ ಶತಾಯಗತಾಯ ಮೈತ್ರಿ ಗಟ್ಟಿಗೊಳಿಸುವಂತೆ ತಾಕೀತು ಮಾಡಿದ್ದಾರಂತೆ. ಹೀಗಾಗಿ ಸಚಿವ ಡಿ. ಕೆ ಶಿವಕುಮಾರ್​ಗೆ ಫೋನ್​ ಮಾಡಿರೋ ವೇಣುಗೋಪಾಲ್​ ಪ್ರವಾಸ ಅರ್ಧಕ್ಕೆ ಮೊಟಕುಗೊಳಿಸಿ ರಾಜ್ಯಕ್ಕೆ ವಾಪಸ್​ ಆಗುವಂತೆ ಹೇಳಿದ್ದಾರಂತೆ. ಅಲ್ಲದೇ, ಕಾಂಗ್ರೆಸ್​ನ ಎಲ್ಲಾ ಶಾಸಕರನ್ನು ಗುಡ್ಡೆ ಹಾಕುವಂತೆ ಸೂಚಿಸಿದ್ದಾರೆ.

ಬಂಡಾಯ ಶಾಸಕರ ನಡೆ ದಳಪತಿಗಳಿಗೂ ತಳಮಳ ಸೃಷ್ಟಿಸಿದೆ. ಹೀಗಾಗಿ ಕಾಂಗ್ರೆಸ್ ನಾಯಕರ ಜೊತೆ ಸಿಎಂ ಕುಮಾರಸ್ವಾಮಿ ಚರ್ಚೆ ನಡೆಸಿದ್ದಾರೆ. ರಮೇಶ್​ ಜಾರಕಿಹೊಳಿಯನ್ನ ಕಟ್ಟಿಹಾಕೋದೇಗೆ. ಆಪರೇಷನ್​ ಕಮಲಕ್ಕೆ ಕೌಂಟರ್​ ಕೊಡೋದೇಗೆ ಅಂತಾ ಡಿಸಿಎಂ ಪರಮೇಶ್ವರ್, ಎಂಟಿಬಿ ನಾಗರಾಜ್, ಕೃಷ್ಣಭೈರೇಗೌಡ ಸೇರಿದಂತೆ ಹಲವು ನಾಯಕರು ಚಕ್ರವ್ಯೂಹ ಸೃಷ್ಟಿಸ್ತಿದ್ದಾರೆ.

ಫಲಿತಾಂಶದ ನಂತರ ಮೈತ್ರಿ ಸರ್ಕಾರಕ್ಕೆ ಏನೂ ಆಗಲ್ಲ

ರಾಜ್ಯದಲ್ಲಿ ಮತ್ತೆ ಆಪರೇಷನ್​ ಕಮಲ ಸದ್ದು ಮಾಡೋಕೆ ಶುರು ಮಾಡ್ತಿದ್ದಂತೆ ಕೈ ನಾಯಕರು ಕೆರಳಿ ಕೆಂಡವಾಗಿದ್ದಾರೆ. ಏಟಿಗೆ ಏಟು. ಕುಸ್ತಿಗೆ ಕುಸ್ತಿ ಅಂತಾ ತಿರುಗಿ ಬಿದ್ದಿದ್ದಾರೆ. ಫಲಿತಾಂಶದ ನಂತರ ಮೈತ್ರಿ ಸರ್ಕಾರಕ್ಕೆ ಏನೂ ಆಗಲ್ಲ. ಒಂದು ವೇಳೆ ಬಿಜೆಪಿಯವರು ಆಪರೇಷನ್​ ಕಮಲ ಮಾಡಿದರೆ ನಾವೂ ಮಾಡ್ತೀವಿ ಅಂತಾ ಟಾಂಗ್​ ಕೊಟ್ಟಿದ್ದಾರೆ.

Comments are closed.