ಕರ್ನಾಟಕ

ಗೃಹಿಣಿಗೆ ಪೂಜೆಯ ನೆಪದಲ್ಲಿ ಧರ್ಮಸ್ಥಳಕ್ಕೆ ಲಾಂಗ್ ಡ್ರೈವ್ ಹೋಗೋಣ ಅಂದವನು ಲಾಕ್ ಆಗಿದ್ದು ಹೇಗೆ ಗೊತ್ತಾ..?

Pinterest LinkedIn Tumblr


ಮೈಸೂರು: ಮಕ್ಕಳಾಗದ ಕಾರಣ ಶನಿ ದೇವರ ಪೂಜೆ ಮಾಡಿಸಲು ಹೋದ ಗೃಹಿಣಿಗೆ ಪೂಜೆಯ ನೆಪದಲ್ಲಿ ಧರ್ಮಸ್ಥಳಕ್ಕೆ ಲಾಂಗ್ ಡ್ರೈವ್ ಹೋಗೋಣ ಎಂದಿದ್ದ ಗುಡ್ಡಪ್ಪನನ್ನು ಗ್ರಾಮಸ್ಥರೆಲ್ಲ ಸೇರಿ ಥಳಿಸಿರುವ ಘಟನೆ ನಡೆದಿದೆ.

ಮೈಸೂರು ತಾಲೂಕು ಮಂಡನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಬಸವರಾಜ್ ನಾಯಕ ಗುಡ್ಡಪ್ಪ (26) ಗೃಹಿಣಿಯ ಜೊತೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿ.

ನಂಜನಗೂಡಿನ ಲಲಿತಾದ್ರಿಪುರ ಗ್ರಾಮದ ಶನಿಮಹಾತ್ಮ ದೇವಸ್ಥಾನದ ಗುಡ್ಡಪ್ಪ ಬಸವರಾಜ ನಾಯಕ. ಐದು ವರ್ಷಗಳ ಹಿಂದೆ ಮದುವೆಯಾಗಿದ್ದ ಮಂಡನಹಳ್ಳಿ ಗ್ರಾಮದ ಗೃಹಿಣಿಗೆ ಮಕ್ಕಳಾಗಿರಲಿಲ್ಲ. ಹೀಗಾಗಿ ಶನಿ ಮಹಾತ್ಮನ ಪೂಜೆಗೆಂದು ಲಲಿತಾದ್ರಿಪುರ ಗ್ರಾಮದ ಶನಿಮಹಾತ್ಮ ದೇವಸ್ಥಾನಕ್ಕೆ ಗೃಹಿಣಿ ಹೋಗುತ್ತಿದ್ದರು. ಇದೇ ನೆಪದಲ್ಲಿ ಗುಡ್ಡಪ್ಪ ಗೃಹಿಣಿ ಜೊತೆ ಅಸಭ್ಯವಾಗಿ ನಡೆದುಕೊಳ್ಳುವುದಕ್ಕೆ ಶುರು ಮಾಡಿದ್ದಾನೆ. ಇನ್ನು 3ತಿಂಗಳು ನನ್ನ ಸೇವೆ ಮಾಡಿದರೆ ಮಕ್ಕಳಾಗುತ್ತೆ ಅಂದಿದ್ದು,
ನನ್ನ ಜೊತೆ ಬಂದರೆ ಮಕ್ಕಳಾಗುತ್ತೆ, ಲಾಂಗ್ ಡ್ರೈವ್ ಹೋಗೋಣ ಅಂತೆಲ್ಲ ಅಸಭ್ಯವಾಗಿ ಮಾತನಾಡಿದ್ದಾನೆ.

ನಂತರ ಆತನ ವರ್ತನೆ ಬಗ್ಗೆ ಗೃಹಿಣಿ ತನ್ನ ಪತಿಗೆ ತಿಳಿಸಿದ್ದಾರೆ. ಪೂಜೆ ಮಾಡಿಸುವ ನೆಪದಲ್ಲಿ ಗುಡ್ಡಪ್ಪನನ್ನು ಗ್ರಾಮಕ್ಕೆ ಕರೆಸಿ ಗ್ರಾಮಸ್ಥರು ಕೂಡಿಹಾಕಿ ಥಳಿಸಿದ್ದಾರೆ. ಬಳಿಕ ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಜಯಪುರ ಪೊಲೀಸರು ಬಂದು ಗುಡ್ಡಪ್ಪನನ್ನು ವಶಕ್ಕೆ ಪಡೆದಿದ್ದಾರೆ.

Comments are closed.