ಕರ್ನಾಟಕ

ಬಿಜೆಪಿಯವರ ಸಹೋದರಿಯರ ಜೊತೆ ಹನಿಮೂನ್ ಮಾಡ್ತೀನಿ’- ಜೆಡಿಎಸ್ ಕಾರ್ಯಕರ್ತ

Pinterest LinkedIn Tumblr


ತುಮಕೂರು: ‘ಬಿಜೆಪಿಯವರ ಅಕ್ಕ-ತಂಗಿ ಅವರನ್ನು ಗೋವಾಗೆ ಕರೆದುಕೊಂಡು ಹೋಗಿ ಹನಿಮೂನ್ ಮಾಡ್ತಿನಿ’ ಎಂದು ಜೆಡಿಎಸ್ ಕಾರ್ಯಕರ್ತ ಅವಹೇಳನಕಾರಿಯಾಗಿ ಕಾಮೆಂಟ್​ ಮಾಡಿ ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತ ಶಫೀ ಅವರಿಂದ ಅವಹೇಳನಕಾರಿಯಾಗಿ ಕಾಮೆಂಟ್​​ ಮಾಡಿದ್ದು ಮಾಜಿ ಶಾಸಕ ಸುರೇಶ್ ಗೌಡ ಫ್ಯಾನ್ಸ್ ಪೇಜ್​​ನಲ್ಲಿ ಶಾಸಕ ಗೌರಿಶಂಕರ್ ಬಗ್ಗೆ ಟೀಕೆ ಮಾಡಲಾಗಿತ್ತು.

ಬರದ ಸಂದರ್ಭದಲ್ಲಿ ಶಾಸಕ ಗೌರಿಶಂಕರ ಮೋಜು ಮಸ್ತಿಗಾಗಿ ಸಿಂಗಾಪುರಕ್ಕೆ ಹೋಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದು ಪೋಸ್ಟ್ ಮಾಡಲಾಗಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಜೆಡಿಎಸ್ ಕಾರ್ಯಕರ್ತ ಕಾಮೆಂಟ್​ ಮಾಡಿದ್ದಾರೆ.

ಸದ್ಯ ಡಿ. ಕೊರಟಗೆರೆಯಲ್ಲಿರುವ ತೆನೆ ಕಾರ್ಯಕರ್ತ ಶಫೀ ಮನೆಯ ಮುಂದೆ ಬಿಜೆಪಿ ಬೆಂಬಲಿಗರು ಪ್ರತಿಭಟನೆ ನಡೆಸುತ್ತದ್ದು ಶಫೀ ಅವರನ್ನು ಬಂಧಿಸುವಂತೆ ಆಗ್ರಹಿಸಿ ಧರಣಿ ನಡೆಸುತ್ತಿದ್ದಾರೆ.

Comments are closed.