ಕರ್ನಾಟಕ

ಡಿ .ಕೆ ಶಿವಕುಮಾರ್ ಮುಂದಿನ ಮುಖ್ಯಮಂತ್ರಿ!?

Pinterest LinkedIn Tumblr


ಬಿಜೆಪಿ ನಾಯಕರು ಹೋದ ಬಂದಲ್ಲೆಲ್ಲಾ 23ಕ್ಕೆ ಸರ್ಕಾರ ಬದಲಾವಣೆ ಆಗುತ್ತೇ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಮುಂದಿನ ಸಿಎಂ ಅಂತಾ ತಿರುಗಾಡುತ್ತಿದ್ದಾರೆ. ಇತ್ತ ಮಾಜಿ ಸಿಎಂ ಸಿದ್ದರಾಮಯ್ಯ ಕೂಡಾ ಸಿಎಂ ಕುರ್ಚಿ ಮೇಲೆ ಕಣ್ಣು ಹಾಕಿದ್ದು, ಸದ್ಯ ಕುರ್ಚಿ ಖಾಲಿ ಇಲ್ವಾಲ್ಲಾ ಎನ್ನುವಾಗಲೇ ಖ್ಯಾತ ಶ್ರೀಗಳು ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್​ ಅವರರಿಗೆ ಸಿಎಂ ಆಗುವ ಯೋಗ್ಯ ಇದೆ. ನೀವೇ ಮುಂದಿನ ಮುಖ್ಯಮಂತ್ರಿ ಎಂದು ಆರ್ಶಿವಾದ ಮಾಡಿದ್ದಾರೆ.

ಘಟಾನುಘಟಿ ನಾಯಕರು ಸಿಎಂ ಕುರ್ಚಿ ಮೇಲೆ ಕಣ್ಣು ಹಾಕಿದ್ದಾರೆ. ಇತ್ತ 23 ಬಳಿಕ ಬಿಜೆಪಿ ಮತ್ತೊಮ್ಮೆ ಮುಖ್ಯಮಂತ್ರಿ ಪಟ್ಟಕ್ಕೆ ತಂತ್ರ ರೂಪಿಸುತ್ತಿದ್ದಾರೆ. ಇನ್ನೂ ಕಾಂಗ್ರೆಸ್ ಹೈಕಮಾಂಡ್‌ ಆದೇಶದಂತೆ ಚಿಂಚೋಳಿ ಹಾಗೂ ಕುಂದಗೋಳ ವಿಧಾನಸಭಾ ಕ್ಷೇತ್ರಗಳನ್ನು ಉಳಿಸಿಕೊಂಡು ಸರ್ಕಾರವನ್ನು ಸುಭದ್ರವಾಗಿಡಲು ಯತ್ನಿಸುತ್ತಿದೆ‌.

ಸಿದ್ದರಾಮಯ್ಯ ಟೀಮ್ ಮತ್ತೊಮ್ಮೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಬೇಕು ಅಂತಾ ಘಟಾಘೋಷವಾಗಿ ಹೇಳುತ್ತಿದ್ದಾರೆ‌. ಇದರ ಮಧ್ಯೆ ಡಿ. ಕೆ ಶಿವಕುಮಾರ್​ಗೆ ಸಿಎಂ ಆಗುವ ಯೋಗಯಿದೆ. ಆ ಶಕ್ತಿ ಸಾಮರ್ಥ್ಯ ಡಿ ಕೆ ಶಿವಕುಮಾರ್​ನಲ್ಲಿದೆ. ಈವರೇ ಮುಂದಿನ ರಾಜ್ಯದ ಸಿಎಂ ಅಂತಾ ಹುಬ್ಬಳ್ಳಿಯ ವರೂರಿನ ಗುಣದರ ನಂದಿ ಮಹರಾಜ ಶ್ರೀಗಳು ಭವಿಷ್ಯ ನುಡದಿದ್ದಾರೆ.

ಕುಂದಗೋಳ ವಿಧಾನಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಕುಸುಮಾ ಶಿವಳ್ಳಿ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ಡಿಕೆಶಿ ಮೇಲಿದೆ. ಹೀಗಾಗಿ ಅವರು ಹಗಲಿರುಳು ಭರ್ಜರಿ ಮತಯಾಚನೆಯಲ್ಲಿ ತೊಡಗಿದ್ದಾರೆ. ಹೀಗೆ ಪ್ರಚಾರ ವೇಳೆ ಪ್ರಖ್ಯಾತ ವರೂರು ಗ್ರಾಮದ ನವಗ್ರಹ ತೀರ್ಥ ಕ್ಷೇತ್ರಕ್ಕೆ ಭೇಟಿ ನೀಡಿದರು. ಬಳಿಕ ಶ್ರೀಗಳ‌ ಆರ್ಶಿವಾದ ಪಡೆದ ನಂತರ ಮಾತನಾಡಿದ ಅವರು, ಈ ಪವಿತ್ರ ಸ್ಥಳಕ್ಕೆ ಬಂದಿದ್ದು ನನ್ನ ಪುಣ್ಯವಾಗಿದ್ದು, ಸಿಎಂ ಆಗುವಂತೆ ಶ್ರೀಗಳು ಆಶಿರ್ವಾದ ಮಾಡಿದ್ದಾರೆ. ಆಶಿರ್ವಾದ ಮಾಡಿರುವುದು ಅವರ ಅಭಿಪ್ರಾಯವಾಗಿದ್ದು, ಇದಕ್ಕೆ ನಾ ಉತ್ತರ ನೀಡಲಾರೆ ಎಂದರು.

Comments are closed.