ರಮೇಶ್ ಜಾರಕಿಹೊಳಿ, ಮತ್ತೆ ಮತ್ತೆ ಆಪರೇಷನ್ಗೆ ಕೈ ಹಾಕುತ್ತಲೇ ಇರ್ತಾರೆ. ಲೋಕಸಭಾ ಚುನಾವಣೆಯ ಮತದಾನದ ಬಳಿಕ ಬಿಜೆಪಿ ಸೇರುವ ಮುನ್ಸೂಚನೆ ನೀಡಿದ್ದ ಅವರು, ಕಳೆದ ನಾಲ್ಕು ದಿನಗಳಿಂದ ಬೆಂಗಳೂರಿಗೆ ಬಂದಿದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡ್ತಾರೆ ಅಂತಲೇ ಹೇಳಲಾಗಿತ್ತು. ಜೊತೆಗೆ ಕಾಂಗ್ರೆಸ್ಅತೃಪ್ತರ ಬಣದ ಸಪೋರ್ಟ್ ಪಡೆದು, ಸರ್ಕಾರ ಉರುಳಿಸುವ ಸಾಹಸಕ್ಕೆ ಕೈ ಹಾಕಿದರು. ಈ ಬಾರಿಯೂ ರಮೇಶ್ ಜಾರಕಿಹೊಳಿಯ ಪ್ಲಾನ್ ವರ್ಕೌಟ್ ಆಗಿಲ್ಲ. ಇವರು ಸಂಪರ್ಕಿಸಿದ್ದ ಅತೃಪ್ತರು ಕೂಡ ಇವರ ಮಾತಿಗೆ ಸೊಪ್ಪು ಹಾಕಿಲ್ಲ. ಹೀಗಾಗಿ ಬಂದ ದಾರಿಗೆ ಸುಂಕವಿಲ್ಲ ಅಂತ ಗೋಕಾಕ್ಗೆ ವಾಪಸ್ಸಾಗಿದ್ದಾರೆ.
ರಮೇಶ್ ಜಾರಕಿಹೊಳಿ ಆಪರೇಷನ್ ಕೈ ಬಿಟ್ಟು ವಾಪಸ್ಸಾಗಲು ಕಾಂಗ್ರೆಸ್ನಲ್ಲಿ ನಡೀತಿರೋ ಬೆಳವಣಿಗೆಗಳು ಕೂಡ ಕಾರಣ ಎನ್ನಲಾಗ್ತಿದೆ. ಸಿಎಲ್ಪಿ ನಾಯಕ ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗಲಿ ಅನ್ನೋ ಕೂಗು ಪ್ರಬಲವಾಗಿ ಕೇಳಿ ಬರ್ತಿದೆ. ಸಚಿವರು, ಶಾಸಕರು ಸಿದ್ದರಾಮಯ್ಯ ಮಂತ್ರ ಜಪಿಸ್ತಿದ್ದಾರೆ. ಜೊತೆಗೆ ಫ್ರೆಶ್ ಎಲೆಕ್ಷನ್ ಹೋಗೋಣ ಅನ್ನೋ ವಿಷಯ ಕೂಡ ಚರ್ಚೆಯಾಗ್ತಿದೆ. ಇದೆಲ್ಲದರ ಮಧ್ಯೆ ಏನೇ ಅತೃಪ್ತಿ ಇದ್ರೂ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಕೂಗಿನಲ್ಲಿ ಕರಗಿ ಹೋಗ್ತಿದೆ. ಇದರಿಂದಲೇ ರಮೇಶ್ ಜಾರಕಿಹೊಳಿ ಆಪರೇಷನ್ ಠುಸ್ಸಾಗಲು ಪ್ರಮುಖ ಕಾರಣ. ಇಷ್ಟೆಲ್ಲ ಬೆಳವಣಿಗೆಗಳಿಂದಲೂ ರಮೇಶ್ ಸ್ವಲ್ಪ ಸುಮ್ಮನಾಗಿದ್ದಾರೆ. ಕಾದು ನೋಡಿ ತೀರ್ಮಾನ ತೆಗೆದುಕೊಂಡಾಯ್ತು ಅಂತ ವಾಪಸ್ ಊರಿಗೆ ಮರಳಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರಕ್ಕೆ ಕಂಟಕವಾಗಿರುವ ರಮೇಶ್ ಜಾರಕಿಹೊಳಿ, ಸದ್ಯ ಸೈಲೆಂಟ್ ಆಗಿದ್ದಾರೆ. ಅತೃಪ್ತರ ಬಲ ಸಿಗಲಿಲ್ಲ ಅನ್ನೋ ಕೊರಗು ಕೂಡ ಇದೆ. ಎಲ್ಲವೂ ಲೋಕಸಭೆ ಎಲೆಕ್ಷನ್ ರಿಸಲ್ಟ್ ಬಂದ ನಂತರ ಕ್ಲಿಯರ್ ಆಗಲಿದೆ. ಲೋಕಸಭೆ ಫಲಿತಾಂಶ ಮೈತ್ರಿ ಸರ್ಕಾರದ ಅಳಿವು ಉಳಿವನ್ನು ನಿರ್ಧರಿಸುತ್ತದೆ. ಜೊತೆ-ಜೊತೆಗೆ ಬಂಡಾಯಗಾರರ ಬಂಡಾಯಕ್ಕೂ ವೇದಿಕೆ ಆಗೋದು ನಿಶ್ಚಿತ.
Comments are closed.