ಕರ್ನಾಟಕ

ಲೋಕಸಭಾ ಚುನಾವಣಾ ನಂತರ ನೀವು ಅಂದುಕೊಂಡಂತೆ ರಾಜಕೀಯ ಬದಲಾವಣೆ ಆಗುತ್ತದೆ: ಕೋಡಿಹಳ್ಳಿ ಸ್ವಾಮೀಜಿ

Pinterest LinkedIn Tumblr


ಲೋಕಸಭಾ ಚುನಾವಣಾ ನಂತರ ರಾಜಕೀಯ ಬದಲಾವಣೆ ವಿಚಾರವಾಗಿ ಕೂಡಿಮಠದ ಕೋಡಿಹಳ್ಳಿ ಸ್ವಾಮೀಜಿ ಮಾತನಾಡಿದ್ದು ನೀವು ಅಂದುಕೊಂಡಂತೆ ಬದಲಾವಣೆ ಆಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.

ಮೇ 23 ರ ವರೆಗೆ ಏನೂ ಮಾತನಾಡಬರದೆಂದು ಬರೆದುಕೊಟ್ಟಿದ್ದೇನೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಮಾತನಾಡಿದ ಅವರು, ಸಮ್ಮಿಶ್ರ ಸರಕಾರದ ಬಗ್ಗೆ ಈಗಾಗಲೇ ಈ ಬಗ್ಗೆ ಹೇಳಿದ್ದಿನಿ, ರಾಜಕೀಯ ವಿಚಾರವಾಗಿ ಏನು ಮಾತನಾಡಲ್ಲ, ಚುನಾವಣಾ ಆಯೋಗ ನನಗೆ ನೋಟಿಸ್ ಕೊಟ್ಟಿದೆ. ಹೀಗಾಗಿ ಮೇ 23 ರ ವರೆಗೆ ಏನೂ ಮಾತನಾಡಬರದೆಂದು ಬರೆದುಕೊಟ್ಟಿದ್ದೇನೆ ಎಂದು ತಿಳಿಸಿದರು.

ಹಿಂದೆ ಕೂಡ ಕೂಡಿಮಠದ ಕೋಡಿಹಳ್ಳಿ ಸ್ವಾಮೀಜಿಯವರು ಭವಿಷ್ಯ ನುಡಿದಿದ್ದರು . ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಯಾರು ಎಷ್ಟೇ ಲೆಕ್ಕಾಚಾರ ಹಾಕಿದರೂ ಅದು ಉಲ್ಟಾ ಆಗುತ್ತಾದೆ. ಯಾವ ಪಕ್ಷಕ್ಕೂ ಬಹುಮತ ಸಿಗದೇ ಹೆಚ್.ಡಿ. ಕುಮಾರಸ್ವಾಮಿ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ ಎಂದು ಹೇಳಿದರು ಅವರು ನುಡಿದಂತೆ ನಿಜವಾಗಿದೆ.

Comments are closed.