ಕರ್ನಾಟಕ

ಬೆಂಗಳೂರಿನಲ್ಲಿ ಮತದಾನ ಮಾಡುವವರಿಗೆ ಸಿಗಲಿದೆ ಬಂಪರ್ ಆಫರ್ ! ಎಲ್ಲೆಲ್ಲಿ ಏನೇನು ಉಚಿತ ಸಿಗಲಿದೆ ನೋಡಿ….

Pinterest LinkedIn Tumblr

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ವೋಟು ಹಾಕುವ ಸಿಲಿಕಾನ್ ಸಿಟಿ ಜನರಿಗೆ ಬಂಪರ್ ಆಫರ್ ಇದೆ.

ಮತದಾನಕ್ಕಾಗಿ ಸರ್ಕಾರ ಮಾತ್ರವಲ್ಲದೇ ಜನ, ಸಂಘಸಂಸ್ಥೆಗಳು ಜಾಗೃತಿ ಮಾಡುತ್ತಿದೆ. ಇತ್ತಿಚೆಗಷ್ಟೇ ನಿಸರ್ಗ ಹೋಟೆಲ್ ಮತದಾನದ ದಿನ ಫ್ರೀ ಬೆಣ್ಣೆದೋಸೆ ಆಫರ್ ನೀಡಿತ್ತು. ಈಗ ಜ್ಯುವೆಲ್ಲರಿ ಮಾಲೀಕರ ಸರದಿಯಾಗಿದ್ದು, ವೋಟು ಹಾಕಿ ಚಿನ್ನ ಖರೀದಿಸಿದರೆ ನಿಮಗೆ ಅಷ್ಟೇ ಪ್ರಮಾಣದ ಬೆಳ್ಳಿ ಉಚಿತವಾಗಿ ಸಿಗುತ್ತದೆ.

ಮತದಾನದ ಶಾಯಿಯನ್ನು ತೋರಿಸಿದರೆ ಬೆಂಗಳೂರಿನ ಯಲಹಂಕದ ಸುಮತಿ ಜ್ಯುವೆಲ್ಲರಿ ಶಾಪ್‍ನಲ್ಲಿ ಏಪ್ರಿಲ್ 18 ರಿಂದ 26ರವರೆಗೆ ಈ ಆಫರ್ ಸಿಗಲಿದೆ. ಮತದಾನ ಜಾಗೃತಿಗೆ ಈ ವಿನೂತನ ಪ್ರಯತ್ನ ಎಂದು ಶಾಪ್ ಮಾಲೀಕ ನವೀನ್ ಕೊಠಾರಿ ಹೇಳಿದ್ದಾರೆ.

ಬಿಪಿ, ಶುಗರ್, ಬ್ಲಡ್ ಟೆಸ್ಟ್ ಎಲ್ಲವೂ ಫ್ರೀ!
ಇನ್ನು ಯಲಹಂಕದ ರೇಡಿಯಲ್ ಡಯಗ್ನಾಸ್ಟಿಕ್ಸ್ ಸೆಂಟರ್‍ನಲ್ಲಿ ಮತದಾನ ಮಾಡಿದವರಿಗೆ ಉಚಿತವಾಗಿ ಮಧುಮೇಹ ಪರೀಕ್ಷೆ, ಕಿಡ್ನಿ ಪರೀಕ್ಷೆ, ರಕ್ತದೊತ್ತಡ ಪರೀಕ್ಷೆಗಳನ್ನು ಪಡೆಯಬಹುದಾಗಿದೆ. ಮತದಾನದ ಜಾಗೃತಿಗಾಗಿ ಈ ಸ್ಪೆಷಲ್ ಆಫರ್ ನೀಡಿದ್ದಾರೆ.

ದೇಶದ ಒಳ್ಳೆಯ ನಾಯಕತ್ವಕ್ಕಾಗಿ ಮತದಾನ ಹೆಚ್ಚಿನ ಪ್ರಮಾಣದಲ್ಲಿ ಆಗಬೇಕು ಎನ್ನುವುದಕ್ಕೆ ಈ ರೀತಿ ಆಫರ್‌ಗಳನ್ನು ನೀಡಲಾಗುತ್ತದೆ ಎಂದು ಮಾಲೀಕರು ತಿಳಿಸಿದ್ದಾರೆ.

Comments are closed.