ಕರ್ನಾಟಕ

‘ಗೋ ಬ್ಯಾಕ್ ನಿಖಿಲ್’ ಘೋಷಣೆ ಕೂಗಿದ ದರ್ಶನ್ ಅಭಿಮಾನಿಗಳು

Pinterest LinkedIn Tumblr


ಮೈಸೂರು: ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಈ ವೇಳೆ ದರ್ಶನ್ ಅಭಿಮಾನಿಗಳು ಡಿ ಬಾಸ್ ಎಂದು ಹೇಳಿ ಗೋ ಬ್ಯಾಕ್ ನಿಖಿಲ್ ಎಂದು ಘೋಷಣೆ ಕೂಗಿದ್ದಾರೆ.

ಮೈಸೂರು ಜಿಲ್ಲೆಯ ಕೆ.ಆರ್ ನಗರ ತಾಲೂಕಿನ ಕೆಸ್ತೂರು ಕೊಪ್ಪಲು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಂದು ಕೊಪ್ಪಲು ಗ್ರಾಮಕ್ಕೆ ಬಂದು ಪ್ರಚಾರ ನಡೆಸುತ್ತಿದ್ದ ವೇಳೆ ನಿಖಿಲ್ ವಿರುದ್ಧ ಡಿ ಬಾಸ್ ಅಭಿಮಾನಿಗಳು ಸಿಡಿದೆದ್ದಿದ್ದರು. ಈ ವೇಳೆ ನಿಖಿಲ್ ಜೊತೆ ಇದ್ದ ಸಚಿವ ಸಾ.ರಾ ಮಹೇಶ್ ಅವರು ಘೋಷಣೆ ಕೂಗುತ್ತಿದ್ದವರ ಮೇಲೆ ಕ್ರಮ ತಗೆದುಕೊಳ್ಳಿ ಎಂದು ಪೊಲೀಸರಿಗೆ ಸೂಚನೆ ನೀಡಿದರು.

ಬಳಿಕ ನಿಖಿಲ್ ವಾಹನದ ಹಿಂದೆ ನಿಂತು ಘೋಷಣೆ ಕೂಗುತ್ತಿದ್ದ ಯುವಕರನ್ನ ಪೊಲೀಸರು ಚದುರಿಸಿದ್ದಾರೆ. ಆಗ ದರ್ಶನ್ ಹಾಗೂ ನಿಖಿಲ್ ಅಭಿಮಾನಿಗಳು ಪರ ವಿರೋಧ ಘೋಷಣೆ ಕೂಗಿದ್ದಾರೆ. ಈ ವೇಳೆ, ಯಾರೋ ಒಂದಿಬ್ಬರು ಆ ರೀತಿ ಕೂಗಿದ್ರೆ ಏನಾಗಲ್ಲ ಬಿಡಿ ಅಣ್ಣ. ಇದೇ ತಿಂಗಳ 18 ರಂದು ತೋರಿಸುತ್ತಿರಲ್ಲ. ಗೊತ್ತಾಗುತ್ತೆ ಎಂದು ಹೇಳಿ ತಮ್ಮ ಪ್ರಚಾರ ಕಾರ್ಯವನ್ನು ನಿಖಿಲ್ ಅವರು ಮುಂದುವರಿಸಿದರು.

Comments are closed.