ಕರ್ನಾಟಕ

ಯಡಿಯೂರಪ್ಪಗೆ ರಾಜ್ಯಾಧ್ಯಕ್ಷ ಸ್ಥಾನ ಹೋಗುತ್ತೆ : ಬಿಜೆಪಿಯ ಹಿರಿಯ ಮುಖಂಡ

Pinterest LinkedIn Tumblr


ದಾವ​ಣ​ಗೆರೆ: ಲೋಕ​ಸಭೆ ಚುನಾ​ವಣೆ ನಂತರ ಬಿ.ಎ​ಸ್‌.​ಯ​ಡಿ​ಯೂ​ರಪ್ಪ ಅವರಿಗೆ ಇರುವ ಬಿಜೆಪಿ ರಾಜ್ಯಾ​ಧ್ಯಕ್ಷ ಸ್ಥಾನ ಹೋಗ​ಲಿದ್ದು, ಮನೆಗೆ ಹೋಗು​ತ್ತಾನೆ ಎಂದು ಕಾಂಗ್ರೆ​ಸ್‌ನ ಹಿರಿಯ ನಾಯಕ, ಶಾಸಕ ಡಾ.ಶಾ​ಮ​ನೂರು ಶಿವ​ಶಂಕ​ರಪ್ಪ ಹೇಳಿದರು.

ಈ ಮೂಲಕ ದಾವ​ಣ​ಗೆರೆ ಲೋಕ​ಸಭಾ ಕ್ಷೇತ್ರವನ್ನು ಈಗಾಗಲೇ ಗೆದ್ದಾ​ಗಿ​ದೆ ಎಂದು ಹೇಳಿಕೆ ನೀಡಿದ ಬಿಎ​ಸ್‌ವೈಗೆ ತಿರು​ಗೇಟು ನೀಡಿ​ದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫಲಿ​ತಾಂಶ ಹೊರ ಬೀಳು​ತ್ತಿ​ದ್ದಂತೆಯೇ ಯಡಿ​ಯೂ​ರಪ್ಪಗೆ ಇರುವ ಸ್ಥಾನವೂ ಹೋಗಲಿದೆ.

ಹೀಗಾಗಿ ಅವರ ಮುಂದಿನ ಜೀವನ ಹೇಗಿರುತ್ತೆ ಅನ್ನುವುದನ್ನು ನೋಡೋಣ. ದಾವ​ಣ​ಗೆರೆ ಕ್ಷೇತ್ರ​ಕ್ಕೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾವು ಸಾಮಾನ್ಯ ವ್ಯಕ್ತಿ​ಯನ್ನು ನಿಲ್ಲಿ​ಸಿ​ದ್ದೇವೆ. ನಮ್ಮ ಅಭ್ಯರ್ಥಿಯ ಗೆಲುವು ಖಚಿತ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

Comments are closed.