ಕರ್ನಾಟಕ

‘ಅಯೋಗ್ಯ’ ಸಹನಟಿ ಅತ್ಯಾಚಾರ ಆರೋಪ ಪ್ರಕರಣಕ್ಕೆ ಹೊಸ ತಿರುವು

Pinterest LinkedIn Tumblr


ಬೆಂಗಳೂರು: ಪ್ರಶಾಂತ್ ಗಂಗಾಧರ್ ವಿರುದ್ಧ ಅಯೋಗ್ಯ ಸಹನಟಿ ಮಾಡಿರುವ ಅತ್ಯಾಚಾರ ಆರೋಪ‌ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹಣಕ್ಕಾಗಿ ಪ್ರಶಾಂತ್ ಗಂಗಾಧರ್​ ಅವರನ್ನು ದೃಶ್ಯಾ ಬೆದರಿಸುತ್ತಿದ್ದರು ಎನ್ನುವ ವಿಚಾರ ಬಯಲಾಗಿದೆ.

ಈ ಬಗ್ಗೆ ಮಾತನಾಡಿರುವ ಪ್ರಶಾಂತ್​, “ದೃಶ್ಯಾ ಬೆದರಿಸಿ ಹಣ ಕಿತ್ತಿದ್ದಾಳೆ. ಮೊಬೈಲ್ ಹ್ಯಾಕ್ ಮಾಡಿ ನನಗೆ ಗೊತ್ತಿಲ್ಲದಂತೆ ಫೋಟೋ ತೆಗೆದುಕೊಂಡಿದ್ದಾಳೆ. ನನಗೆ ಯಾವ ಯುವತಿಯ ಜೊತೆಯೂ ಅನೈತಿಕ ಸಂಬಂಧವಿಲ್ಲ. ನಾನು ಸೈಬರ್ ಕ್ರೈಂನಲ್ಲಿ ದೃಶ್ಯ ವಿರುದ್ಧ ದೂರು ನೀಡಿದ್ದೇನೆ. ನಾನು ಆತ್ಯಾಚಾರ ಮಾಡಿದ್ದೇನೆ ಎನ್ನುವ ಆರೋಪ ಸುಳ್ಳು. ಆದರೂ ನಾನು ನಿರೀಕ್ಷಣಾ ಜಾಮೀನು ಪಡೆದಿದ್ದೇನೆ. ಪೊಲೀಸರ ಮುಂದೆ ಹೇಳಿಕೆ ಕೂಡ ನೀಡಿದ್ದೇನೆ. ದೃಶ್ಯಾ ವಂಚಕಿ ಅನ್ನೋದರ ಬಗ್ಗೆ ಸಾಕ್ಷಿ ನೀಡಿದ್ದೇನೆ,” ಎಂದು ಹೇಳಿದ್ದಾರೆ.

“ದೃಶ್ಯಾಗೆ ಈಗಾಗಲೇ ವಿವಾಹವಾಗಿತ್ತು. ಅವರಿಗೆ ಮದುವೆಯಾಗಿ ಮಗು ಕೂಡ ಇದೆ. ಅವಳು ಹಣಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧಳಿದ್ದಾಳೆ. ನನಗೆ ಬ್ಲಾಕ್​ಮೇಲ್ ಮಾಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾಳೆ. ತನ್ನ ಸ್ನೇಹಿತೆ ಜೊತೆ ಹಣ ಸಂಪಾದನೆ ಬಗ್ಗೆ ಬಾಯಿಬಿಟ್ಟಿದ್ದಳು. ಇದರ ಆಡಿಯೋ ಕೂಡ ಇದೆ. ಮೂರ್ನಾಲ್ಕು ಯುವಕರ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆ,” ಎಂದು ಅವರು ದೂರಿದರು.

ಕಳದೆ ವರ್ಷ ತೆರೆಕಂಡ ‘ಅಯೋಗ್ಯ’ ಸಿನಿಮಾದಲ್ಲಿ ಸಹ ನಟಿಯಾಗಿ ದೃಶ್ಯಾ ನಟಿಸಿದ್ದರು. ಈ ಬಗ್ಗೆ ಅವರು ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು. ಈಗ ಈ ಪ್ರಕರಣಕ್ಕೆ ಸಂಬಂಧಿಸಿ ಅವರು ಸಾಕ್ಷಿ ಸಮೇತ ಹಾಜರಾಗಿದ್ದಾರೆ.

Comments are closed.