ಕರ್ನಾಟಕ

ನಿಮ್ಮ ಮನೆಯಲ್ಲಿ ಯಾರಾದರೂ ಸತ್ತಿದ್ದರೆ ನಿಮ್ಮ ಕುಟುಂಬದವರು ಒಂದೇ ವಾರದಲ್ಲಿ ಅಧಿಕಾರಕ್ಕೆ ಬರುತ್ತಿದ್ದರು: ರೇವಣ್ಣಗೆ ರೇಣುಕಾಚಾರ್ಯ ತಿರುಗೇಟು

Pinterest LinkedIn Tumblr

ದಾವಣಗೆರೆ: ನಿಮ್ಮ ಮನೆಯಲ್ಲಿ ಯಾರಾದರೂ ಸತ್ತಿದ್ದರೆ ನಿಮ್ಮ ಕುಟುಂಬದವರು ಒಂದೇ ವಾರದಲ್ಲಿ ಅಧಿಕಾರಕ್ಕೆ ಬರುತ್ತಿದ್ದರು ಎಂದು ಸಚಿವ ಎಚ್​.ಡಿ.ರೇವಣ್ಣಗೆ ಶಾಸಕ ಎಂ.ಪಿ.ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ.

ದಾವಣೆಗೆರೆಯಲ್ಲಿ ಮಾತನಾಡಿದ ಅವರು, ಸುಮಲತಾ ಅಂಬರೀಶ್​ ಪರ ಬ್ಯಾಟಿಂಗ್​ ಮಾಡಿದರು. ಕುಮಾರಸ್ವಾಮಿ ಕುಟುಂಬ ಅಂಬರೀಶ್ ಕೈ-ಕಾಲು ಹಿಡಿದು ಮಂಡ್ಯದಲ್ಲಿ ಗೆಲುವು ಸಾಧಿಸಿತು. ಈಗ ಅಂಬರೀಶ್ ಕುಟುಂಬದ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಬದುಕಿದ್ದಾಗ ಅಂಬರೀಶ್ ಅವರನ್ನು ಹೇಗೆ ಬಳಸಿಕೊಂಡರೋ, ಅವರ ಮರಣದ ನಂತರ ಗೌರವ ಕೊಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಬಳಿಕ ಸುಮಲತಾ ಬಿಜೆಪಿಗೆ ಬಂದರೆ ಸ್ವಾಗತ ಎಂದು ಹೇಳಿದರು.

ದೇವೇಗೌಡರ ಕುಟುಂಬ ಒಂದು ದೊಡ್ಡ ನಾಟಕದ ಕಂಪನಿ. ನಾಟಕ ಆಡೋದು ಅವರಿಗೆ ಚೆನ್ನಾಗಿ ಗೊತ್ತು. ಸುಮಲತಾಗೆ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ನಾಟಕೀಯವಾಗಿ ಕ್ಷಮೆಯಾಚಿಸಿದ್ದಾರೆ. ಕುಮಾರಸ್ವಾಮಿಗೆ ತಾಕತ್ ಇದ್ರೆ ರೇವಣ್ಣ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು. ಒಂದು ವೇಳೆ ಸಚಿವ ಸಂಪುಟದಿಂದ ಕೈ ಬಿಡದಿದ್ದರೆ ಜೆಡಿಎಸ್ ಸರ್ವನಾಶ ಶತಸಿದ್ಧ ಎಂದರು.

ಮೋದಿಯೇ ಮುಂದಿನ ಪ್ರಧಾನಿ

ಲೋಕಸಭಾ ಚುನಾವಣೆ ಮೋದಿ ವರ್ಸಸ್ ಮಹಾಘಟ್ ಬಂಧನ್ ನಡುವೆ ನಡೆಯತ್ತದೆ. ಮಹಾಘಟ್ ಬಂಧನ್​​ಗೆ ಯಾರು ನಾಯಕರು ಎನ್ನುವುದೇ ಗೊತ್ತಿಲ್ಲ. ಸೂರ್ಯ-ಚಂದ್ರ ಇರುವುದು ಎಷ್ಟು ಸತ್ಯವೋ, ಮೋದಿ ಮತ್ತೆ ಪ್ರಧಾನಿಯಾಗುವುದು ಅಷ್ಟೇ ಸತ್ಯ. ದೇಶಾದ್ಯಂತ ಮೋದಿ ಪರ ಅಲೆ ಎದ್ದಿದೆ. ಮೋದಿ ಆಡಳಿತವನ್ನು ಇಡೀ ಜಗತ್ತೇ ಮೆಚ್ಚಿದೆ. ದೇಶದಲ್ಲಿ 300 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ

Comments are closed.