ಕರ್ನಾಟಕ

ರಾತ್ರೋ ರಾತ್ರಿ ರೌಡಿಶೀಟರ್ ಕೊಲೆ – ತಲೆ ಪೀಸ್ ಪೀಸ್

Pinterest LinkedIn Tumblr


ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ನೆತ್ತರು ಹರಿದಿದ್ದು, ಹುಳಿಮಾವು ಬಳಿಯ ಕಲ್ಯಾಣ ನಗರ ಇಂಡೊಸೆಂಟ್ ಎಟಿಎಂ ಮುಂದೆ ರೌಡಿ ಶೀಟರ್ ಪ್ರಶಾಂತ್‍ನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದಾರೆ.

ಈ ಘಟನೆ ರಾತ್ರಿ ಸುಮಾರು 11:45ಕ್ಕೆ ನಡೆದಿದ್ದು, ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಲಾಗಿದೆ. ಕಾರಿನಲ್ಲಿ ಬಂದ ಐದಾರು ಮುಸುಕುಧಾರಿಗಳಿಂದ ಈ ಡೆಡ್ಲಿ ಅಟ್ಯಾಕ್ ನಡೆದಿದ್ದು, ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಮೃತ ರೌಡಿ ಪ್ರಶಾಂತ್ ತಲೆ ಪೀಸ್ ಪೀಸ್ ಆಗಿದೆ.

ಕೊಲೆಯಾದ ಪ್ರಶಾಂತ್ ಮಾರತಹಳ್ಳಿಯ ನಿವಾಸಿಯಾಗಿದ್ದು, ಸ್ಥಳಕ್ಕೆ ಪೂರ್ವ ವಿಭಾಗದ ಡಿಸಿಪಿ ರಾಹುಲ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇನ್ನು ಮರಣೋತ್ತರ ಪರೀಕ್ಷೆಗಾಗಿ ಅಂಬೇಡ್ಕರ್ ಆಸ್ಪತ್ರೆಗೆ ಪ್ರಶಾಂತ್ ಮೃತದೇಹವನ್ನ ರವಾನಿಸಲಾಗಿದೆ.

ಈ ಪ್ರಕರಣ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

Comments are closed.