ಬೆಂಗಳೂರು: ಲೋಕಸಭೆ ಚುನಾವಣೆ ಸಮೀಪಿಸುತ್ತಿದಂತೆಯೇ ದೇಶಾದ್ಯಂತ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ. ಚುನಾವಣೆ ತಯಾರಿ ಹಿನ್ನೆಲೆಯಲ್ಲಿಯೇ ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬೆಂಗಳೂರಿಗೆ ಆಗಮಿಸಿದ್ದು, ರಾಜ್ಯ ಬಿಜೆಪಿ ನಾಯಕರ ಜತೆಗೆ ಮಹತ್ವದ ಸಭೆ ನಡೆಸಿದ್ದಾರೆ. ಯಲಹಂಕದ ಹೋಟೆಲ್ ರಾಯಲ್ ಆರ್ಕಿಡ್ನಲ್ಲಿ ನಡೆದ ಈ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಲೋಕಸಭಾ ಸಂಚಾಲಕರು, ಸಂಸದರು, ಶಾಸಕರು, ಪದಾಧಿಕಾರಿಗಳು ಭಾಗಿಯಾಗಿದ್ದರು ಎನ್ನಲಾಗಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿಯೇ ಇಂದು ಮಹತ್ವದ ಸಭೆ ನಡೆಸಲಾಗಿದೆ. ಮೊದಲು ಶಾಸಕರು ಮತ್ತು ವಿಧಾನಸಭಾ ಪರಿಷತ್ ಸದಸ್ಯರ ಜತೆಗೆ ಸಭೆ ನಡೆಸಿದ ಅಮಿತ್ ಶಾ ಅವರು, ಹಲವು ಮಹತ್ವದ ಮಾತುಕತೆ ನಡೆಸಿದ್ಧಾರೆ. ಬಳಿಕ ಹಾಗೆಯೇ ಸಂಸದ ಮತ್ತು ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ಇವರು, ಲೋಕಸಭೆ ಚುನಾವಣೆ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ.
ಇನ್ನು ಕೊನೆಯಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಲಾಗಿದೆ. ಇಲ್ಲಿ “ಮೇರಾ ಪರಿವಾರ್, ಮೇರಾ ಬಿಜೆಪಿ”(ನನ್ನ ಮನೆ, ನನ್ನ ಬಿಜೆಪಿ) ಎಂಬ ಕಾರ್ಯಕ್ರಮದ ಬಗ್ಗೆ ಚರ್ಚಿಸಲಾಗಿದೆ. ಈ ಕಾರ್ಯಕ್ರಮದ ಹೆಸರಿನಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಧ್ವಜ ಹಾರಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಇದೇ ವೇಳೆ ಇಲ್ಲಿಯವರೆಗೂ ರಾಜ್ಯದಲ್ಲಿ ಬಿಜೆಪಿ ಆಯೋಜಿಸಿದ್ದ ಎಲ್ಲಾ ಕಾರ್ಯಕ್ರಮಗಳ ಕುರಿತು ಅಮಿತ್ ಶಾ ಅವರು ಮಾಹಿತಿ ಸಂಗ್ರಹಿಸಿದ್ದಾರೆ.
ಇನ್ನು ಒಂದಷ್ಟು ಮುಖಂಡರ ಸಭೆ ನಡೆಸಬೇಕಾಗಿತ್ತು. ಸಮಯದ ಅಭಾವದಿಂದ ಎಲ್ಲರನ್ನು ಸೇರಿಸಿ ಕೊನೆಯದಾಗಿ ಸಭೆ ನಡೆಸಿದರು. ಇಲ್ಲಿನ ವೇದಿಕೆ ಮೇಲೆಯೇ ಆರ್. ಅಶೋಕ್ ವಿಚಾರದಲ್ಲಿ ಬಿ.ಎಸ್ ಯಡಿಯೂರಪ್ಪ ಹಾಗೂ ಸಂತೋಷ್ ನಡುವೆ ಭಿನ್ನಾಭಿಪ್ರಾಯ ಸಂಭವಿಸಿತ್ತು. ಹೀಗಾಗಿ ಬಿಎಸ್ ಯಡಿಯೂರಪ್ಪ ಅವರಿಂದ ಸಂತೋಷ್ ಅಂತರ ಕಾಯ್ದುಕೊಂಡಿದ್ದಾರೆ ಎನ್ನುತ್ತಿವೆ ಮೂಲಗಳು.
‘ಮಹಾಘಟಬಂಧನ್’ ಒಂದು ವೇಳೆ ಅಧಿಕಾರಕ್ಕೆ ಬಂದರೇ ಎಂತಹ ಸರ್ಕಾರ ರಚಿಸಬಹುದು ಎಂಬುದನ್ನು ಜನರ ಮುಂದಿಡಿ. ಹಾಗೆಯೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಮೈತ್ರಿ ನಾಯಕರನ್ನು ಹೋಲಿಸಿ; ಯಾರು ದೇಶಕ್ಕೆ ಅಭಿವೃದ್ಧಿ ಪರ ಸರ್ಕಾರ ಕೊಡಬಲ್ಲರು ಎಂಬುದನ್ನು ಸಾರಿ ಹೇಳಿ ಎಂದಿದ್ಧಾರೆ. ಅಲ್ಲದೇ ನಮಗೆ ಈ ಬಾರಿಯೂ ಬಹಮತ ಸಿಗುತ್ತೆ. ಶಿವಸೇನೆ, ಎಐ.ಡಿಎಂ.ಕೆ ಸೇರಿದಂತೆ ಜೆಡಿಯು ಎಲ್ಲರೂ ನಮ್ಮ ಜೊತೆಯಲ್ಲೇ ಇದ್ದಾರೆ. ಇಡೀ ದೇಶದಲ್ಲಿ ಬಿಜೆಪಿಪರ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಕಾರ್ಯಕರ್ತರು ಇದಿನಿಂದಲೇ ಪೂರ್ಣ ಸಮಯ ಚುನಾವಣೆಗಾಗಿ ಮೀಸಲಿಡಬೇಕು ಎಂದು ಅಮಿತ್ ಶಾ ಸೂಚಿಸಿದ್ದಾರೆ.
ಮಾರ್ಚ್ 2 ರೊಳಗೆ ಎಲ್ಲಾ ಬಿಜೆಪಿ ಕಾರ್ಯಕರ್ತರು ತಮ್ಮ ಮನೆಗಳ ಮೇಲೆ ಬಿಜೆಪಿ ಧ್ವಜ ಹಾರಿಸಬೇಕು. ಕನಿಷ್ಟ 40 ಲಕ್ಷ ದ್ವಜ ಹಾರಿಸಬೇಕು. ಬಿಜೆಪಿ ಕಾರ್ಯಕರ್ತರು ಕನಿಷ್ಟ 40 ಲಕ್ಷ ದೀಪ ಬೆಳೆಸಬೇಕು. ಪ್ರತಿ ಭೂತ್ನಲ್ಲಿಯೂ ಬಿಜೆಪಿಗೆ ಲೀಡ್ ಸಿಗಬೇಕು. ‘ಮೇರಾ ಭೂತ್ ಸಬ್ ಸೇ ಮಜಬೂತ್’ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಬೇಕು ಎಂದು ರಾಜ್ಯ ಬಿಜೆಪಿ ನಾಯಕರಿಗೆ ಎಲ್ಲಾ ರೀತಿಯ ಸಲಹೆ ಮತ್ತು ಸೂಚನೆ ನೀಡಿದ್ಧಾರೆ ಎನ್ನುತ್ತಿವೆ ಉನ್ನತ ಮೂಲಗಳು.
Comments are closed.