ಕರ್ನಾಟಕ

ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸಲಿರುವ ನಟ ಪ್ರಕಾಶ್ ರಾಜ್’ಗೆ ‘ನಾವು ಗೆಳೆಯರ ಬಳಗ’ ಬೆಂಬಲ

Pinterest LinkedIn Tumblr

ಶಿವಮೊಗ್ಗ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿರುವ ಬಹುಭಾಷಾ ನಟ ಪ್ರಕಾಶ್ ರಾಜ್ ಅವರಿಗೆ ನಾವು ಗೆಳೆಯರ ಬಳಗ ಬೆಂಬಲ ವ್ಯಕ್ತಪಡಿಸಿದೆ. ಆ ಕ್ಷೇತ್ರದಿಂದ ಇತರ ಪಕ್ಷಗಳು ಅಭ್ಯರ್ಥಿಗಳನ್ನು ಹಾಕದಂತೆ ಮನವಿ ಮಾಡಿಕೊಂಡಿದೆ.

ಪ್ರಕಾಶ್ ರಾಜ್ ಒಬ್ಬ ಕಲಾವಿದರಾಗಿ ಬಹುದೊಡ್ಡದಾದ ಸಾಮಾಜಿಕ ಜವಾಬ್ದಾರಿ ಇದೆ. ಸುಮಾರು 200 ಸಂಸ್ಥೆಗಳೊಂದಿಗೆ ವೇದಿಕೆ ಸ್ಥಾಪನೆಯಾಗಿದ್ದು, 400 ಕ್ಕೂ ಹೆಚ್ಚು ಲೇಖಕರು ಜೊತೆಯಲ್ಲಿರುವುದಾಗಿ ಸಂಘಟಕರಾದ ಕೆ.ಎಲ್. ಅಶೋಕ್ ಹಾಗೂ ಕೆ ಪಿ ಶ್ರೀಪಾಲ್ ತಿಳಿಸಿದರು.

ಪ್ರಕಾಶ್ ರಾಜ್ ಅನೇಕ ಸರ್ಕಾರಿ ಶಾಲೆಗಳನ್ನು ಅಭಿವೃದ್ದಿಗಾಗಿ ದತ್ತು ಪಡೆದಿದ್ದಾರೆ. ನಿರ್ಲಕ್ಷಿತ ಸಮುದಾಯದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಪ್ರಜಾಪ್ರಜಾಪ್ರಭುತ್ವದ ಉದ್ದೇಶದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ ಎಂದು ಅಶೋಕ್ ಹೇಳಿದ್ದಾರೆ.

ರಾಜಕೀಯ ಪಕ್ಷಗಳು ರಾಜಕಾರಣ ಮಾಡಲು ಜಾತಿ, ಹಣ, ಮತ್ತು ಮದ್ಯವನ್ನು ಬಳಸುತ್ತವೆ ಮತ್ತು ಉದ್ಯಮಿಗಳು ರಾಜಕೀಯ ಪಕ್ಷಗಳಿಂದ ರಕ್ಷಣೆ ಪಡೆದುಕೊಳ್ಳುತ್ತಿವೆ ಎಂದು ಅವರು ಟೀಕಿಸಿದರು.

Comments are closed.