ಕರ್ನಾಟಕ

ಭಿಕ್ಷೆ ಬೇಡಿ ಅನ್ನ ಹಾಕಿದ ಅಜ್ಜಿಯ ಅತ್ಯಾಚಾರ, ಕೊಲೆ!

Pinterest LinkedIn Tumblr


ಬೊಮ್ಮನಹಳ್ಳಿ: ಭಿಕ್ಷೆ ಬೇಡಿ ತಂದು ಅನ್ನ ಹಾಕಿದ ಅಜ್ಜಿಯನ್ನು ವಿಕೃತವಾಗಿ ಅತ್ಯಾಚಾರ ಮಾಡಿ ಕೊಲೆ ಮಾಡಿದ ಗಾಂಜಾ ವ್ಯಸನಿ ಯುವಕನನ್ನು ಬೊಮ್ಮನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

19 ವರ್ಷದ ಹರೀಶ್‌ ಬಂಧಿತ ಯುವಕ. ಈತ 80 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ ಎಸಗಿ ಅಮಾನವೀಯವಾಗಿ ಕೊಲೆ ಮಾಡಿದ್ದಾನೆ. ರೂಪೇನ ಅಗ್ರಹಾರದ ಎನ್‌ಜಿಆರ್‌ ಬಡಾವಣೆಯ ಸ್ಮಶಾನದ ಬಳಿ ಇರುವ ಶೆಡ್‌ನಲ್ಲಿ ಘಟನೆ ನಡೆದಿದೆ. ಸ್ಮಶಾನದಲ್ಲಿ ಕಾವಲು ಕಾಯುತ್ತಿದ್ದ ಯಲ್ಲಮ್ಮ ಕೊಲೆಯಾದವರು.

ಶನಿವಾರ ಸಂಜೆ ಮಹಿಳೆಯೊಬ್ಬರು ಸ್ಮಶಾನ ಬಳಿ ಕುರಿ ಕಟ್ಟಿ ಹಾಕಲು ಹೋಗಿದ್ದಾಗ ಯಲ್ಲಮ್ಮ ಅವರು ವಾಸವಿದ್ದ ಶೆಡ್‌ನಿಂದ ಚೀರಾಟ ಕೇಳಿ ಬಂದಿತ್ತು. ತಕ್ಷಣ ಅವರು ಬಾಗಿಲು ತೆಗೆದಿದ್ದು, ಈ ವೇಳೆ ಯಲ್ಲಮ್ಮ ಅವರು ರಕ್ತದ ಮಡುವಲ್ಲಿ ಬಿದ್ದಿದ್ದರು. ಈ ವೇಳೆ ಆರೋಪಿ ಹರೀಶ್‌ ಬಾಗಿಲ ಬಳಿ ಅಡಗಿ ಕುಳಿತಿದ್ದ. ತಕ್ಷಣ ಮಹಿಳೆ ಸ್ಥಳೀಯರಿಗೆ ಮಾಹಿತಿ ನೀಡಿದ್ದು, ಅವರೆಲ್ಲರೂ ಸೇರಿ ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿ ಹರೀಶನನ್ನು ಬಂಧಿಸಿದ್ದಾರೆ.

ವಿಕೃತಿ ಪ್ರದರ್ಶನ: ಆರೋಪಿ ಹರೀಶ ಅನಾಥ. ಆತನೂ ಸ್ಮಶಾನದ ಬಳಿಯೇ ಮಲಗುತ್ತಿದ್ದ. ಯಲ್ಲಮ್ಮ ಅವರು ಹರೀಶನಿಗೆ ಹಲವು ವರ್ಷಗಳಿಂದ ತನ್ನ ಮನೆಯಲ್ಲಿಯೇ ಊಟ ಹಾಕುತ್ತಿದ್ದರು. ಹೊರಗೆ ಭಿಕ್ಷೆ ಬೇಡಿಕೊಂಡು ಬಂದು, ಯಾರಾದರೂ ಕೊಟ್ಟ ಹಣದಲ್ಲಿ ಅನ್ನ ಬೇಯಿಸಿ ಹರೀಶನಿಗೆ ನೀಡುತ್ತಿದ್ದರು. ಆದರೆ, ಅದೇ ಮಹಿಳೆಯ ಮೇಲೆ ಗಾಂಜಾ ಮತ್ತಿನಲ್ಲಿ ಆರೋಪಿ ವಿಕೃತಿ ಎಸಗಿದ್ದಾನೆ. ತಲೆಗೆ ಕಟ್ಟಿಗೆಯಿಂದ ಬಡಿದಿದ್ದಲ್ಲೆ, ಎದೆ ಭಾಗವನ್ನು ಕಚ್ಚಿ ಮಾಂಸ ಕಿತ್ತಿದ್ದ. ಮರ್ಮಾಂಗಕ್ಕೆ ಕಡ್ಡಿಗಳಿಂದ ಚುಚ್ಚಿ ಗಾಯ ಮಾಡಿದ್ದ.

ತೋಟಿ ಕೆಲಸ: ಯಲ್ಲಮ್ಮ 40 ವರ್ಷಗಳಿಂದ ಸ್ಮಶಾನದಲ್ಲಿ ತೋಟಿ ಕೆಲಸ ಮಾಡುತ್ತಿದ್ದರು. ಪತಿ ವರ್ಷದ ಹಿಂದೆ ನಿಧನರಾದ ಬಳಿಕ ಏಕಾಂಗಿಯಾಗಿದ್ದರು. ಅವರಿಗೆ ಮಕ್ಕಳಿದ್ದರೂ, ಅವರ ಮನೆಗೆ ಹೋಗದೆ ಸ್ಮಶಾನದ ಶೆಡ್‌ನಲ್ಲಿಯೇ ಮಲಗುತ್ತಿದ್ದರು.

Comments are closed.