ಕರ್ನಾಟಕ

ನಾಲ್ವರು ಐಪಿಎಸ್ ಅಧಿಕಾರಿಗಳ ವರ್ಗಾವಣೆಗೊಳಿಸಿ ರಾಜ್ಯ ಸರಕಾರದ ಆದೇಶ

Pinterest LinkedIn Tumblr

ಬೆಂಗಳೂರು: ರಾಜ್ಯದಲ್ಲಿನ ಸಿಎಂ ಕುಮಾರಸ್ವಾಮಿ ನೇತ್ರತ್ವದ ಸಮ್ಮಿಶ್ರ ಸರ್ಕಾರ ನಾಲ್ವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ದಿಡೀರ್ ಆದೇಶ ಹೊರಡಿಸಿದೆ. ನಾಲ್ವರು ಅಧಿಕಾರಿಗಳ ಪೈಕಿ ಕೆಲವರಿಗೆ ಬಡ್ತಿಯನ್ನು ನೀಡಿ ವರ್ಗಾವಣೆ ಮಾಡಲಾಗಿದೆ. ಹುಬ್ಬಳ್ಳಿ- ಧಾರವಾಡ ನಗರ ಪೊಲೀಸ್ ಆಯುಕ್ತರಾಗಿ ಬಿ.ಎಸ್.ಲೋಕೇಶ್ ಅವರನ್ನು ನೇಮಕ ಮಾಡಲಾಗಿದೆ. ಅಂತೆಯೇ ಮೈಸೂರು ನಗರ ಪೊಲೀಸ್ ಆಯುಕ್ತರಾಗಿ ಕೆ.ಟಿ.ಬಾಲಕೃಷ್ಣ ಅವರನ್ನು ನೇಮಕ ಮಾಡಲಾಗಿದೆ.

ಇನ್ನು ಕೆಜಿಎಫ್ ಎಸ್ಪಿ ಆಗಿದ್ದ ಬಿ.ಎಸ್.ಲೋಕೇಶ್ ಅವರಿಗೆ ಡಿಐಜಿ ಆಗಿ ಬಡ್ತಿ ನೀಡಲಾಗಿದೆ. ಅಂತೆಯೇ ಗುಪ್ತಚರ ಇಲಾಖೆ ಎಸ್ಪಿ ಆಗಿದ್ದ ಕೆ.ಟಿ.ಬಾಲಕೃಷ್ಣ ಡಿಐಜಿ ಆಗಿ ಬಡ್ತಿ ನೀಡಲಾಗಿದೆ. ಬೆಳಗಾವಿ ನಗರದ ಪೊಲೀಸ್ ಆಯುಕ್ತರಾಗಿ ಪಿ.ರಾಜೇಂದ್ರ ಪ್ರಸಾದ್ ಅವರನ್ನು, ಬೆಂಗಳೂರಿನಲ್ಲಿ ವೈರ್ಲೆಸ್ ವಿಭಾಗದ ಎಸ್ಪಿ ಆಗಿದ್ದ ರಾಜೇಂದ್ರ ಪ್ರಸಾದ್ ಡಿಐಜಿ ಆಗಿ ಬಡ್ತಿ ನೀಡಲಾಗಿದೆ. ಯೋಜನೆ‌ ಹಾಗು ಆಧುನಿಕರಣ ವಿಭಾಗದ ಡಿಐಜಿಯಾಗಿ ಆರ್.ರಮೇಶ್ ಅವರನ್ನು ನೇಮಕ ಮಾಡಲಾಗಿದೆ.

Comments are closed.