ಕರ್ನಾಟಕ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹಿಂದೂ ಮುಸ್ಲಿಂ ಜೋಡಿ

Pinterest LinkedIn Tumblr


ಮಂಡ್ಯ: ಪರಸ್ಪರ ಪ್ರೀತಿಸುತ್ತಿದ್ದ ಅನ್ಯಧರ್ಮೀಯ ಪ್ರೇಮಿಗಳು ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಉದ್ಯಾನವನದಲ್ಲಿ ಅಂಬೇಡ್ಕರ್ ಪುತ್ಥಳಿ ಬಳಿ ನವಜೀವನಕ್ಕೆ ಕಾಲಿಟ್ಟರು.
ತಾಲೂಕಿನ ಟಿ.ಮಲ್ಲಿಗೆರೆ ಗ್ರಾಮದ ಬಾಬು ಮತ್ತು ಅಜೀಮಾ ಎಂಬುವರ ಪುತ್ರ ಸಲ್ಮಾನ್, ಅದೇ ಗ್ರಾಮದ ಮಹದೇವು ಹಾಗೂ ರಾಣಿ ಪುತ್ರಿ ಅನುಪ್ರಿಯ ಹೆತ್ತವರು ಹಾಗೂ ವಿವಿಧ ಸಂಘಟನೆಗಳ ಮುಖಂಡರ ಸಮ್ಮುಖದಲ್ಲಿ ಹಾರ ಬದಲಿಸಿಕೊಂಡರು.
ಅಪರೂಪದ ಮದುವೆಗೆ ಗ್ರಾಮದ ಸಿದ್ದರಾಮು, ಕೃಷ್ಣ ಜತೆಗೆ ಬೌದ್ಧ ಸೊಸೈಟಿಯ ಚಿದಂಬರಂ, ವಿಜಯಲಕ್ಷ್ಮೀ ರಘುನಂದನ್, ಅಮ್ಜದ್‌ಪಾಷಾ, ಗವಿರಾಜು, ಕೃಷ್ಣ ಮೊದಲಾದವರು ಸಾಕ್ಷಿಯಾದರು. ಇದಕ್ಕೂ ಮುನ್ನ ಉಪನೋಂದಣಾಧಿಕಾರಿ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಸಿ, ವಿವಾಹಕ್ಕೆ ಅಧಿಕೃತ ಮುದ್ರೆ ಒತ್ತಿಸಲಾಯಿತು.

Comments are closed.