ಕರ್ನಾಟಕ

ಎರಡು ಪಂಗಡಗಳ ನಡುವೆ ಇದ್ದ ವೈಮನಸ್ಯವೇ ವಿಷ ಪ್ರಸಾದ ದುರಂತಕ್ಕೆ ಕಾರಣ; ಮಾರಮ್ಮ ಗುಡಿಗೆ ಬೀಗ

Pinterest LinkedIn Tumblr

ಚಾಮರಾಜನಗರ: ಚಾಮರಾಜನಗರ ವಿಷ ಪ್ರಸಾದ ದುರಂತ ಬಳಿಕ ದುರಂತಕ್ಕೆ ಕಾರಣವಾದ ಸುಳ್ವಾಡಿಯ ಕಿಚ್ಚುಗುತ್ತು ಮಾರಮ್ಮ ಗುಡಿಗೆ ಬೀಗ ಜಡಿಯಲಾಗಿದೆ.

ದೇಗುಲದದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮಾರಮ್ಮ ಗುಡಿಗೆ ಬೀಗ ಜಡಿಯಲಾಗಿದ್ದು, ನಿತ್ಯವೂ ಧಾರ್ಮಿಕ ಚಟುವಟಿಕೆಗಳಿಂದ ಕೂಡಿರುತ್ತಿದ್ದ ದೇವಸ್ಥಾನವನ್ನು ಬಂದ್ ಮಾಡಲಾಗಿದೆ. ದೇವಸ್ಥಾನದ ಪುರೋಹಿತರು, ಅಡುಗೆ ತಯಾರಕರು, ಭದ್ರತಾ ಸಿಬ್ಬಂದಿಯ ಕುಟುಂಬಗಳಲ್ಲೂ ಸಾವು, ನೋವು ಸಂಭವಿಸಿದ್ದು, ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.

ವಿಷ ಪ್ರಸಾದ ಸೇವನೆ ಬಳಿಕ ಈ ವರೆಗೂ ಸತ್ತವರ ಸಂಖ್ಯೆ 18ಕ್ಕೆ ಏರಿಕೆಯಾಗಿದ್ದು, ಬಿದರಳ್ಳಿ ಗ್ರಾಮವೊಂದರಲ್ಲೇ 7 ಮಂದಿ ದುರ್ಮರಣವನ್ನು ಹೊಂದಿದ್ದು ಪ್ರಕರಣದ ಭೀಕರತೆಗೆ ಹಿಡಿದ ಕೈಗನ್ನಡಿಯಾಗಿದೆ.

ಎರಡು ಪಂಗಡಗಳ ನಡುವೆ ಇದ್ದ ವೈಮನಸ್ಯವೇ ಇದಕ್ಕೆ ಕಾರಣ
ಇನ್ನು ವಿಷ ಪ್ರಸಾದದ ಹಿಂದೆ ಕಾಣದ ಕೈಗಳ ಕೈವಾಡ ಶಂಕೆ ವ್ಯಕ್ತವಾಗುತ್ತಿದ್ದು, ದೇವಾಲಯದ ಗೋಪುರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಎರಡು ಪಂಗಡಗಳ ನಡುವೆ ಇದ್ದ ವೈಮನಸ್ಯವೇ ಇದಕ್ಕೆ ಕಾರಣ ಎನ್ನಲಾಗಿದೆ. ವಿರೋಧಿ ಬಣ ಜನರು ಈ ಕೃತ್ಯವೆಸಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ದೇವಸ್ಥಾನದ ಅರ್ಚಕರು, ಅಡುಗೆ ತಯಾರಕರು, ಭದ್ರತಾ ಸಿಬ್ಬಂದಿ ಕುಟುಂಬಗಳಲ್ಲೂ ಸಾವು, ನೋವು ಸಂಭವಿಸಿದ್ದು, ಇಡೀ ಗ್ರಾಮವೇ ನಿನ್ನೆ ನಡೆದ ಘಟನೆಗೆ ತತ್ತರಿಸಿದೆ.

ಕಿಚ್ಚಗುತ್ತಿ ಮಾರಮ್ಮ ದೇವಾಲಯ
ರಾಮಾಪುರದಿಂದ 20 ಕಿ.ಮೀ ಅಂತರದಲ್ಲಿರುವ ಸುಳ್ವಾಡಿ ಗ್ರಾಮದ ಈ ದೇಗುಲವು ಗ್ರಾಮದ ಹೊರವಲಯದಲ್ಲಿದ್ದು, ಹುಣ್ಣಿಮೆ, ಅಮಾವಾಸ್ಯೆ ಹಾಗೂ ಹಬ್ಬದ ವಿಶೇಷ ದಿನಗಳಂದು ವಿಶೇಷ ಪೂಜೆ-ಪುನಸ್ಕಾರ ನಡೆಯುತ್ತವೆ. ಅಲ್ಲದೆ ಆಗಾಗ್ಗೆ ಭಕ್ತರು ಮಾಂಸದೂಟದ ಪಂಕ್ತಿಸೇವೆಯನ್ನೂ ನೆರವೇರಿಸುತ್ತಾರೆ.

Comments are closed.