ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಈಗಾಗಲೇ ಸಂಕಷ್ಟ ಎದುರಿಸುತ್ತಿರುವ ರಾಘವೇಶ್ವರ ಶ್ರೀಗಳಿಗೆ ಮತ್ತೊಂದು ಕಂಟಕ ಎದುರಾಗಿದೆ.
ಮಠದ ಭಕ್ತರಾಗಿದ್ದ ಶ್ಯಾಮಪ್ರಸಾದ್ ಶ್ಯಾಸ್ತ್ರಿ ಆತ್ಮಹತ್ಯೆ ಪ್ರಕರಣದಲ್ಲಿ ರಾಘವೇಶ್ವರ ಭಾರತೀ ಪಾತ್ರದ ಕುರಿತು ಸಿಐಡಿ ಸಲ್ಲಿಸಿರುವ ಚಾರ್ಜ್ಶೀಟ್ನಲ್ಲಿ ಸ್ವಾಮಿ ವಿರುದ್ಧದ ಆರೋಪ ಸಾಬೀತಾಗಿದೆ.
ಶ್ಯಾಮಪ್ರಸಾದ್ ಶ್ಯಾಸ್ತ್ರಿ ಆತ್ಮಹತ್ಯೆಗೆ ರಾಘವೇಶ್ವರ ಸ್ವಾಮಿ ನೀಡಿದ ಪ್ರಚೋದನೆಯೇ ಕಾರಣ ಎಂದು ಸಿಐಡಿ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದ್ದು, ಪುತ್ತೂರು ನ್ಯಾಯಾಲಯದಲ್ಲಿ ಜಾರ್ಜ್ ಶೀಟ್ ಸಲ್ಲಿಸಲಾಗಿದೆ.
ಸ್ವಾಮಿ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಶ್ಯಾಮಪ್ರಸಾದ್ ಶಾಸ್ತ್ರಿಗೆ ಅಣ್ಣ ದಿವಾಕರ್ ಶಾಸ್ತ್ರಿ ಅತ್ತಿಗೆ ಪ್ರೇಮಲತಾ ವಿರುದ್ದ ಹೇಳಿಕೆ ನೀಡಬೇಕೆಂದು ಮಠದ ಕಡೆಯಿಂದ ಒತ್ತಾಯ ಹೇರಲಾಗಿತ್ತು. ಜೊತೆಗೆ ಕೆಲವು ಕಾಗದ ಪತ್ರಗಳಿಗೆ ಸಹಿ ಹಾಕುವಂತೆ ಅವರನ್ನು ಪೀಡಿಸಿದ್ದರು.
ಶ್ರೀಗಳ ಅನುಯಾಯಿಗಳಾದ ಬೋನಂತಾಯ ಶಿವಶಂಕರ್ ಭಟ್ ಮತ್ತು ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಕೂಡ ತಮ್ಮ ಪರವಾಗಿ ಕೆಲವು ಕಾಗದ ಪತ್ರಗಳಿಗೆ ಸಹಿ ಹಾಕಿ, ಹೇಳಿಕೆ ನೀಡದೇ ಇದ್ದರೆ ಕೇಸ್ನಲ್ಲಿ ನಿನ್ನನ್ನು ಬಂಧಿಸುತ್ತೇವೆ. ಅಷ್ಟೇ ಅಲ್ಲದೇ ಹವ್ಯಕ ಸಮಾಜದಿಂದ ಬಹಿಷ್ಕಾರ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದರು ಎಂದು ಚಾರ್ಜ್ಶೀಟ್ನಲ್ಲಿ ಆರೋಪಿಸಲಾಗಿದೆ.
ಅಷ್ಟೇ ಅಲ್ಲದೇ ‘ಗುರುಶಾಪ’ಕ್ಕೆ ಗುರಿಯಾಗಿ ಬದುಕುವುದು ಕಷ್ಟ ಎಂದು ಪ್ರಾಣ ಬೆದರಿಕೆ ಒಡ್ಡಿ ಸಾಯಲು ಪ್ರೇರಣೆ ನೀಡಿದ್ದರು ಎಂದು ಸಿಐಡಿ ಜಾರ್ಜ್ ಶೀಟ್ನಲ್ಲಿ ಉಲ್ಲೇಖಿಸಿದೆ.
ರಾಘವೇಶ್ವರ ಭಾರತೀ ಹೇಳಿದಂತೆ ನಡೆದುಕೊಳ್ಳದೆ ಹೋದಲ್ಲಿ ತಾನು ಬದುಕುವುದು ಕಷ್ಟ ಎಂದು ಶ್ಯಾಮಪ್ರಸಾಸ್ ಶಾಸ್ತ್ರಿ ಆತ್ಮಹತ್ಯೆಗೆ ಮುಂದಾಗಿದ್ದು, ತನಿಖೆಯಲ್ಲಿ ದೃಢಪಟ್ಟಿದೆ ಎಂದು ಉಲ್ಲೇಖಿಸಲಾಗಿದೆ. ಪ್ರಕರಣದಲ್ಲಿ ರಾಘವೇಶ್ವರಶ್ರೀ ಮೊದಲ ಆರೋಪಿಯಾದರೆ, ಎ2 ಬೋನಂತಾಯ ಶಿವಶಂಕರ್ ಭಟ್ ಮತ್ತು ಎ3 ಕಲ್ಲಡ್ಕ ಪ್ರಭಾಕರ ಭಟ್ ಎಂದು ಸಿಐಡಿ ದೋಷಾರೋಪ ಮಾಡಿದೆ.
2014ರ ಆಗಸ್ಟ್ 31ರಂದು ಮಠದ ಭಕ್ತರಾಗಿದ್ದ ಶ್ಯಾಮ್ ಪ್ರಸಾದ್ ಪುತ್ತೂರಿನ ತನ್ನ ಮನೆಯಲ್ಲಿ ಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಆತ್ಯಹತ್ಯೆ ಬಗ್ಗೆ ತನಿಖೆ ನಡೆಸುವಂತೆ ಅವರ ಹೆಂಡತಿ ಸಂಧ್ಯಾ ಲಕ್ಮೀ ದೂರು ಸಲ್ಲಿಸಿದ್ದರು. ಈ ಪ್ರಕರಣವನ್ನು ಸಿಐಡಿ ತನಿಖೆಗೆ ಸರ್ಕಾರ ವಹಿಸಿತ್ತು.
Comments are closed.