ಕರ್ನಾಟಕ

ವಾಯು ಮಾಲಿನ್ಯದಲ್ಲಿ ದಿಲ್ಲಿಯನ್ನು ಮೀರಿಸಿದ ಸಿಲಿಕಾನ್ ಸಿಟಿ!

Pinterest LinkedIn Tumblr


ಬೆಂಗಳೂರು: ವಾಯು ಮಾಲಿನ್ಯ ಎಂದಾಕ್ಷಣ ದಿಲ್ಲಿಯತ್ತ ನೋಡುತ್ತಿದ್ದ ಬೆಂಗಳೂರಿಗರಿಗೆ ಶಾಕಿಂಕ್‌ ನ್ಯೂಸ್‌. ವಾಹನಗಳಿಂದ ಹೊಗೆ ಉತ್ಪತ್ತಿ ಮತ್ತು ರಸ್ತೆ ಧೂಳು ವಿಚಾರದಲ್ಲಿ ರಾಷ್ಟ್ರದ ಟಾಪ್‌ 2 ನಗರವಾಗಿ ಬೆಂಗಳೂರು ಗುರುತಿಸಲ್ಪಟ್ಟಿದೆ.

ಇತ್ತೀಚೆಗೆ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ(ಸಿಪಿಸಿಬಿ) ಬಿಡುಗಡೆ ಮಾಡಿದ ವರದಿ ಪ್ರಕಾರ ವಾಯು ಮಾಲಿನ್ಯ ಪೀಡಿತ ನಗರಗಳ ಪೈಕಿ ಬೆಂಗಳೂರು 2ನೇ ಸ್ಥಾನದಲ್ಲಿದೆ. ವಾಹನಗಳಿಂದ ಹೊಗೆ ಉತ್ಪತ್ತಿ ಮತ್ತು ಧೂಳಿನ ವಿಚಾರದಲ್ಲಿ ದಿಲ್ಲಿಯನ್ನು ಮೀರಿಸಿದೆ. ಪುಣೆ ನಂ.1 ಸ್ಥಾನದಲ್ಲಿದೆ. ಬೆಂಗಳೂರು ನಗರದ ಹೊರವಲಯದಲ್ಲಿ ಕೈಗಾರಿಕೆ ಚಟುವಟಿಕೆಗಳು ಹೆಚ್ಚಿರುವುದೇ ಪ್ರಮುಖ ಕಾರಣ ಎನ್ನಲಾಗಿದೆ.

ಆದರೆ ಈ ವರದಿ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ)ಯ ಮುಖ್ಯಸ್ಥ ಲಕ್ಷ್ಮಣ್‌, ಬೆಂಗಳೂರಿನಲ್ಲಿ ಹೆಚ್ಚಿನ ಮಾಲಿನ್ಯಕಾರಕ ಕೈಗಾರಿಕೆಗಳು ಇಲ್ಲ. ಈ ಅಂಕಿಅಂಶಗಳು ಸರಿಯಾಗಿಲ್ಲ ಎಂದು ಭಾವಿಸುತ್ತೇನೆ. ಪರಿಶೀಲಿಸಲಾಗುವುದು ಎಂದಿದ್ದಾರೆ.

Comments are closed.