ಬೆಂಗಳೂರು: ಪದೇ ಪದೇ ಕ್ಯಾತೆ ತೆಗೆಯುತ್ತಿರುವ ಶಿವಸೇನೆಯಿಂದ ಇದೀಗ ಮತ್ತೊಂದು ಕ್ಯಾತೆ. ಬೆಳಗಾವಿಯನ್ನು 2ನೇ ರಾಜಧಾನಿ ಮಾಡುವ ವಿಚಾರವನ್ನೇ ರಾಜಕಾರಣ ಮಾಡಲು ಹೊರಟಿದ್ದಾರೆ. ಆದರೆ, ಸುಪ್ರೀಂಕೋರ್ಟ್ನಲ್ಲಿ ಈ ಆಟ ನಡೆಯುವುದಿಲ್ಲ ಎಂದು ತಿಳಿದಿದ್ದರೂ ರಾಜಕಾರಣಕ್ಕಾಗಿ ಈ ಕ್ಯಾತೆ ತೆಗೆದಿರುವುದು ವಿಪರ್ಯಾಸ.
ಕಳೆದ 50 ವರ್ಷಗಳಿಂದಲೂ ಇಲ್ಲದ ಕಿತಾಪತಿ ಇದೀಗ ಎದ್ದಿದೆ. ಬೆಳಗಾವಿಯನ್ನು ಕರ್ನಾಟಕದ 2ನೇ ರಾಜಧಾನಿ ಮಾಡ್ತೀನಿ ಎಂದು ಕುಮಾರಸ್ವಾಮಿ ಹೇಳಿಕೆ ನೀಡಿದ ಬೆನ್ನಲ್ಲೇ ಈ ಕಿತಾಪತಿ ಶುರುವಾಗಿದೆ. ಇದನ್ನು ಪ್ರಶ್ನಿಸಿ ಸುಪ್ರೀಂನಲ್ಲಿ ನ್ಯಾಯಾಂಗ ನಿಂದನೆ ಕೇಸ್ ಹಾಕಿ ಎನ್ನುವ ಪುಕ್ಕಟೆ ಸಲಹೆ ನೀಡುತ್ತಿದೆ ಶಿವಸೇನೆ. ಆದರೆ, ಅದಕ್ಕೆ ವಾಸ್ತವವೇ ಗೊತ್ತಿಲ್ಲ. ಇತ್ತ ಜೆಡಿಎಸ್ನವರು ಅದೇನೇ ಆದರೂ ತಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎನ್ನುತ್ತಿದ್ದಾರೆ.
ಇದು ಕಿತಾಪತಿಯೋ.. ಕ್ಯಾತೆಯೋ ಅಥವಾ ಲೋಕಸಭೆ ಚುನಾವಣೆಯ ವೋಟ್ಬ್ಯಾಂಕ್ ರಾಜಕಾರಣವೋ ಎಂಬುವುದು ಈಗ ಅನಗತ್ಯ. ಆದರೆ, ಗಡಿ ವಿಚಾರ ಬಂದಾಗ ಈ ರೀತಿ ಒಗ್ಗೂಡುವ ಮನೋಭಾವ ಕನ್ನಡಿಗ ರಾಜಕಾರಣಿಗಳಿಗೆ ಇಲ್ಲವಲ್ಲಾ ಎನ್ನುವುದು.
ಎಂಇಎಸ್, ಶಿವಸೇನೆಗೆ ಬೈಯ್ಯುವ ಮುನ್ನ ನಮ್ಮ ರಾಜಕಾರಣಿಗಳಿಗೆ ಬುದ್ಧಿ ಹೇಳುವುದು ಸರಿ ಎನ್ನುತ್ತಾರೆ ಕನ್ನಡಪರ ಹೋರಾಟಗಾರರು.
ನ್ಯಾಯಾಂಗ ನಿಂದನೆ ಆಗೋ ಭಯವೇ ಇಲ್ಲದಿದ್ದರೂ, ಕುಮಾರಸ್ವಾಮಿ ದಿಟ್ಟತನ ತೋರುತ್ತಾರಾ? ಸಿಎಂ ಪರವಾಗಿ ಹೋರಾಟಗಾರು ನಿಲ್ಲುತ್ತಾರಾ ಎನ್ನುವುದೇ ಕುತೂಹಲ.
Comments are closed.