ಕರ್ನಾಟಕ

ಡಿಕೆಶಿ ಆಪ್ತನೆಂದು ಹೇಳಿ 14 ಲಕ್ಷ ವಂಚಕನ ಬಂಧನ!

Pinterest LinkedIn Tumblr


ಬೆಂಗಳೂರು: ನಾನು ಸಚಿವ ಡಿ.ಕೆ.ಶಿವಕುಮಾರ್‌ ಆಪ್ತ ಎಂದು ಸರ್ಕಾರಿ ಕೆಲಸ ಕೆಪಿಎಸ್‌ಸಿ ಸದಸ್ಯ ಕೋಟಾದಲ್ಲಿ ಸರ್ಕಾರಿ ಕೆಲಸ ಕೊಡುವುದಾಗಿ ಯುವಕನೊಬ್ಬನಿಗೆ ಬರೋಬ್ಬರಿ 14 ಲಕ್ಷ ರೂಪಾಯಿ ಪಂಗನಾಮ ಹಾಕಿದ್ದಾನೆ.

ವಂಚಕ ಮಂಜುನಾಥ್‌ನನ್ನು ಸದ್ಯ ಸುಬ್ರಹ್ಮಣ್ಯ ನಗರ ಠಾಣೆಯ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ವಂಚಕ ಮಂಜುನಾಥ್‌, ವೆಂಕಟೇಶ್‌ ಎನ್ನುವವರಿಗೆ ಕೆಪಿಎಸ್‌ಸಿ ಕೋಟಾದಡಿ ಹುದ್ದೆ ಕೊಡಿಸುತ್ತೇನೆ. ನನಗೆ ಸಚಿವರ ಆಪ್ತ ಎಂದು ಹಂತ ಹಂತವಾಗಿ ನಗದು ರೂಪದಲ್ಲಿ ಹಣವನ್ನು ಪಡೆದಿದ್ದಾನೆ. ಮಾತ್ರವಲ್ಲದೆ ನಕಲಿ ನೇಮಕಾತಿ ಪತ್ರವನ್ನೂ ಕಳುಹಿಸಿದ್ದಾನೆ. ಸಚಿವರ ಆಪ್ತ ಶಾಖಾಧಿಕಾರಿ ಎಂಬ ನಕಲಿ ಗುರುತು ಪತ್ರವನ್ನೂ ತೋರಿಸಿ ವಂಚಿಸಿದ್ದ.

ವೆಂಕಟೇಶ್‌ ಅವರು ಕೆಪಿಎಸ್‌ಸಿ ಕಚೇರಿಯಲ್ಲಿ ವಿಚಾರಿಸಿದಾಗ ವಂಚನೆ ಬಯಲಾಗಿದೆ. ನಕಲಿ ಪ್ರಮಾಣ ಪತ್ರ ಎಂದು ತಿಳಿದು ಕೊಂಡಿದ್ದಾರೆ.

ವಿಚಾರವನ್ನು ಪ್ರಶ್ನಿಸಿದಾಗ ಮಂಜುನಾಥ್‌ ಮೊಬೈಲ್‌ ಸ್ವಿಚ್‌ ಆಫ್ ಮಾಡಿಕೊಂಡು ತಪ್ಪಿಸಿಕೊಂಡಿದ್ದ.

ವೆಂಕಟೇಶ್‌ ಹಲವರಿಗೆ ಇದೇ ರೀತಿ ವಂಚಿಸಿರುವ ಸಾಧ್ಯತೆಗಳಿದ್ದು ಪೊಲೀಸರ ವಿಚಾರಣೆಯಿಂದ ತಿಳಿದು ಬರಬೇಕಿದೆ.

Comments are closed.