ಕರ್ನಾಟಕ

ಚಂದ್ರಗ್ರಹಣದ ಹಿನ್ನೆಲೆಯಲ್ಲಿ ತಿರುಪತಿಗೆ ತೆರಳಿ ವೆಂಕಟೇಶ್ವರನ ದರ್ಶನ ಪಡೆದಿದ ದೇವೇಗೌಡರ ಕುಟುಂಬ

Pinterest LinkedIn Tumblr

ಬೆಂಗಳೂರು: ಶುಕ್ರವಾರ ಸಂಭವಿಸಲಿರುವ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಮತ್ತವರ ಕುಟುಂಬ ತಿರುಪತಿಗೆ ತೆರಳಿ ವೆಂಕಟೇಶ್ವರನ ದರ್ಶನ ಪಡೆದಿದ್ದಾರೆ.

ಗುರುವಾರ ತಿರುಪತಿ ಬೆಟ್ಟಕ್ಕೆ ತೆರಳಿದ್ದ ಮಾಜಿ ಪ್ರಧಾನಿ ದೇವೇಗೌಡ, ಮತ್ತವರ ಪತ್ನಿ ಚೆನ್ನಮ್ಮ, ಮುಖ್ಯಮಂತ್ರಿ ಎಚ್,ಡಿ ಕುಮಾರ ಸ್ಲಾನಿ ದಂಪತಿ ಮತ್ತು ಎಚ್.ಡಿ ರೇವಣ್ಣ ತಿರುಪತಿಗೆ ತೆರಳಿ ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕನ ದರ್ಶನ ಪಡೆದಿದ್ದಾರೆ.

ಶಾಸ್ತ್ರ ಸಂಪ್ರದಾಯ, ಜ್ಯೋತಿಷ್ಯದ ಬಗ್ಗೆ ಅಪಾರ ನಂಬಿಕೆ ಹೊಂದಿರುವ ದೇವೇಗೌಡ ಕುಟುಂಬ, ಚಂದ್ರ ಗ್ರಹಣದಿಂದ ಯಾವುದೇ ಕೆಡುಕಾಗುವುದನ್ನು ತಪ್ಪಿಸಲು ತಿರುಪತಿ ತಿರುಮಲ ದೇವಾಸ್ಥಾನಕ್ಕೆ ತೆರಳಿ ಪೂಜಾ ಕೈಂಕರ್ಯ ನೆರವೇರಿಸಿದ್ದಾರೆ.

ಗುರುವಾರ ರಾತ್ರಿ ತಿರುಪತಿಯಲ್ಲಿ ತಂಗಿದ್ದ ದೇವೇಗೌಡ ಕುಟುಂಬ ಶುಕ್ರಾವಾರ ಬೆಳಗ್ಗೆ ಬಾಲಾಜಿ ಮತ್ತು ಪದ್ಮಾವತಿ ಅಮ್ಮನವರ ದರ್ಶನ ಪಡೆದಿದ್ದಾರೆ,

ಇನ್ನು ಮುಖ್ಯಮಂತ್ರಿ ಕುಮಾರ ಸ್ವಾಮಿ ತಿರುಪತಿಗೆ ಭೇಟಿ ನೀಡಿರುವುದರ ಹಿನ್ನೆಲೆಯಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕೆ ಇರುವ ಕಾನೂನು ತೊಡಕುಗಳು ನಿವಾರಣೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ತಿರುಪತಿ ಬೆಟ್ಟದ ಮೇಲೆ ಏಳೂವರೆ ಎಕರೆ ಜಾಗದಲ್ಲಿ ಕರ್ನಾಟಕ ಭವನ ನಿರ್ಮಾಣ ಮಾಡಲಾಗುತ್ತಿದೆ.ಹಿಂದಿನ ಸಿದ್ದರಾಮಯ್ಯ ಸರ್ಕಾರ ತಿರುಮಲದಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕಾಗಿ ಬಜೆಟ್ ನಲ್ಲಿ 20 ಕೋಟಿ ರು ಅನುದಾನ ನೀಡಿತ್ತು.

Comments are closed.