ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಕಳೆದ 10ದಿನಗಳಿಂದ ಬಿಡುವು ನೀಡದಂತೆ ಮಳೆ ಸುರಿಯುತ್ತಿದ್ದು, ಜನರು ತತ್ತಿರಿಸಿದ್ದಾರೆ.
ಸೂರ್ಯ ಕಾಣದ ಮಳೆಯ ವಾತಾವರಣದಿಂದ ಹೈರಾಣಾಗಿರುವ ಜನರಿಗೆ ವಿದ್ಯುತ್ ಸಂಪರ್ಕ ಕೂಡ ಇಲ್ಲದಂತೆ ಆಗಿದೆ. ಭಾರೀ ಮಳೆ-ಗಾಳಿಗೆ ಈಗಾಗಲೇ ಹಲವು ಮರ, ವಿದ್ಯುತ್ ಕಂಬಗಳು ಧರೆಗೆ ಉರುಳಿದೆ. ಪರಿಣಾಮವಾಗಿ ಕಳೆದೊಂದು ವಾರದಿಂದ ವಿದ್ಯುತ್ ಸಂಪರ್ಕವಿಲ್ಲದೆ ಜನರು ಪರದಾಡುತ್ತಿದ್ದಾರೆ. ಕರೆಂಟ್ ಇಲ್ಲದ ಪರಿಣಾಮ ಮೊಬೈಲ್ ಚಾರ್ಚ್ ಇಲ್ಲದೇ ಜನರು ತಮ್ಮ ಸ್ನೇಹಿತರು, ಸಂಬಂಧಿಕರಿಗೆ ಸಂಪರ್ಕ ಮಾಡದೆ ತೊಂದರೆಗೆ ಇಡಾಗಿದ್ದಾರೆ.
ಜಿಲ್ಲೆಯ ಮೆಲ್ಪಾಲು ಗ್ರಾಮದ ಬಿಎಸ್ಎನ್ಎಲ್ ನೆಟ್ವರ್ಕ್ ಒಂದೇ ಸಿಗುತ್ತಿದ್ದು, ಮೊಬೈಲ್ ಚಾರ್ಚ್ ಇಲ್ಲದೆ ಇರುವುದರಿಂದ ಜನರು ಜನರೇಟರ್ ಮೊರೆ ಹೋಗಿದ್ದಾರೆ. ಜನರೇಟರ್ ಆನ್ ಆದ ಕೂಡಲೇ ಒಟ್ಟಿಗೆ ಹತ್ತಿಪ್ಪತ್ತು ಜನರು ಒಟ್ಟಿಗೆ ಚಾರ್ಚ್ ಮೊರೆ ಹೋಗುತ್ತಿದ್ದಾರೆ.
ಭಾರೀ ಮಳೆಯಿಂದಾಗಿ ಪೆಟ್ರೋಲ್ ತರಲು ಸಾಧ್ಯವಾಗದ ವಾತಾವರಣ ನಿರ್ಮಾಣವಾಗಿದ್ದು, ಒಮ್ಮೆ ಜನರೇಟರ್ ಶುರುವಾದ ಕೂಡಲೇ ಗ್ರಾಮಸ್ಥರು ಮೊಬೈಲ್ ಹಿಡಿದು ಬರುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ತಾಲೂಕು ಕೇಂದ್ರಗಳಲ್ಲಿಯೂ ವಿದ್ಯುತ್ ಕಣ್ಣಾ ಮುಚ್ಚಾಲೆಯಾಡುತ್ತಿದ್ದು, ಜನರು ಕತ್ತಲೆಯಲ್ಲಿ ದಿನದೂಡುವಂತೆ ಆಗಿದೆ.
ಜಿಲ್ಲೆಯ ಕೊಪ್ಪ, ಬಾಳೆಹೊನ್ನೂರು, ಕಳಸ, ಕುದುರೆಮುಖ ಭಾಗದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಬಾಳೆಹೊನ್ನೂರಿನಲ್ಲಿ ಭಾರೀ ಮಳೆ-ಗಾಳಿ ಭೂಕುಸಿತ ಉಂಟಾಗಿದ್ದು ತೋಟ ಹಾಗೂ ತೋಟದಲ್ಲಿ ಬಾವಿಗೆ ಹಾನಿಯಾಗಿದೆ
Comments are closed.