ಕರ್ನಾಟಕ

ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ವಿಕೃತ ಕಾಮಿಗೆ ಜೀವಾವಧಿ ಶಿಕ್ಷೆ

Pinterest LinkedIn Tumblr


ರಾಯಚೂರು: ದಿನಬೆಳಗಾದರೆ ಒಂದಲ್ಲಾ ಒಂದು ಮಹಿಳೆಯ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಕಿರುಕುಳದಂತ ಅಮಾನವೀಯ ಘಟನೆಗಳು ಕಿವಿಗೆ ಬೀಳುತ್ತವೆ. ಕೆಲವೊಂದು ಘಟನೆಗಳನ್ನು ಅರಗಿಸಿಕೊಳ್ಳುವುದು ಅಸಾಧ್ಯ ಅನ್ನುವಷ್ಟರ ಮಟ್ಟಿಗೆ ಬೇಸರ ತರುತ್ತವೆ. ಸಾಮಾನ್ಯವಾಗಿ ಮಹಿಳೆಯ ಮೇಲೆ ದೌರ್ಜನ್ಯ ಪ್ರಕರಣಗಳು ನಮಗೆ ಕಾಣುತ್ತವೆ, ಆದರೆ ಇಲ್ಲೊಬ್ಬ ವ್ಯಕ್ತಿ 2 ವರ್ಷದ ಗಂಡು ಮಗುವನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಅಷ್ಟಕ್ಕೇ ಸುಮ್ಮನಾಗದ ಅಪರಾಧಿ ಮಗುವನ್ನು ಸಾಯಿಸಿದ್ದ. ಸದ್ಯ ಈ ವಿಕೃತ ಕಾಮಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಈ ಕೃತ್ಯದ ಮಾಹಿತಿ ಇಲ್ಲಿದೆ.

ಏನಿದು ಪ್ರಕರಣ?:

ಎರಡು ವರ್ಷದ ಬಾಲಕನನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ನಡೆಸಿರುವ ವಿಕೃತ ಕಾಮಿಯೊಬ್ಬನಿಗೆ ಜೀವಾವಧಿ ಶಿಕ್ಷೆ ವಿಧಿಸಿ ರಾಯಚೂರಿನ 1ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಆದೇಶಿದ್ದಾರೆ.

ತೆಲಂಗಾಣದ ಮಲ್ಲಾಪುರ ಗ್ರಾಮದ ಮೂಲದ ವೀರೇಶ ಚೆಟ್ಟಿ ಎಂಬ ವ್ಯಕ್ತಿಯೇ ಈ ವಿಕೃತ ಮನೋವ್ಯಾಧಿ ಹೊಂದಿರುವವನು. 2016 ಫೆಬ್ರವರಿ 9 ರಂದು ಮಗುವನ್ನು ರಾಯಚೂರಿನ ಶಾಖಾವಾದಿ ಊರಿನಿಂದ ಹೊತ್ತೊಯ್ದ ವೀರೇಶ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಪರಿಚಯಸ್ಥರ ಹೆಸರು ಹೇಳಿಕೊಂಡು ಮಗುವನ್ನು ಕೊಂಡೊಯ್ದು ರಾಯಚೂರು ನಗರದ ಆರ್​ಟಿಓ ವೃತ್ತದ ಬಳಿ ಲೈಂಗಿಕ ದೌರ್ಜನ್ಯ ನಡೆಸಿ ನಂತರ ಬಾಲಕನನ್ನು ಕೊಲೆ ಮಾಡಲಾಗಿತ್ತು. ಅಲ್ಲದೆ ಬಾಲಕನ ಹತ್ತಿರ ಇದ್ದ ಬಂಗಾರವನ್ನು ಅಪಹರಿಸಿದ್ದ.

ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದರು. ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಂ ಮಹಾದೇವಯ್ಯ ಆರೋಪಿ ಕೊಲೆ ಮಾಡಿರುವದು ಸಾಬೀತಾದ ಹಿನ್ನೆಲೆ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 1.80 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಸಮಾಜದ ಸ್ವಾಸ್ಥ್ಯವನ್ನು ಕದಡುವ ಇಂಥಾ ವಿಕೃತ ಮನಸ್ಸುಗಳೇ ಇತ್ತೀಚಿದ ದಿನಗಳಲ್ಲಿ ಹೆಚ್ಚಾಗುತ್ತಿದೆ. ಈ ರೀತಿಯ ಅಸ್ವಸ್ಥ ಮನಸ್ಸುಗಳನ್ನು ಬದಲಾಯಿಸಲು ಕೇವಲ ಶಿಕ್ಷಣದಿಂದ ಮಾತ್ರ ಸಾಧ್ಯ. ಒಂದೋ ಉತ್ತಮ ಶಿಕ್ಷಣ ಅವರಿಗೆ ಸಿಗಬೇಕು, ಅಥವಾ ಅಂಥವರು ಸ್ವಶಿಕ್ಷಿತರಾಗಬೇಕು. ಅವೆರಡೂ ಸದ್ಯಕ್ಕೆ ದೂರದ ಬೆಟ್ಟವಾಗಿರುವುದರಿಂದ ಕಾನೂನಿನ ಛಾಟಿಯಿಂದ ಭಯಪಡಿಸುವುದೊಂದೇ ಉಳಿದ ದಾರಿಯಾಗಿದೆ.

Comments are closed.